Thursday, January 29, 2026
Google search engine
Homeಚಳುವಳಿಪ್ರೊ.ಬಿ.ಕೃಷ್ಣಪ್ಪ ನಂಬಿದವರನ್ನು ಕೈಬಿಡದ ಬಹುದೊಡ್ಡ ಶಕ್ತಿ - ಪ್ರೊ.ರವಿವರ್ಮಕುಮಾರ್

ಪ್ರೊ.ಬಿ.ಕೃಷ್ಣಪ್ಪ ನಂಬಿದವರನ್ನು ಕೈಬಿಡದ ಬಹುದೊಡ್ಡ ಶಕ್ತಿ – ಪ್ರೊ.ರವಿವರ್ಮಕುಮಾರ್

ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದವರಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ದೊಡ್ಡಶಕ್ತಿಯಾಗಿದ್ದರು. ಅವರು ನಂಬಿದವರನ್ನು ಎಂದೂ ಕೈಬಿಡದೆ ಜೊತೆಯಲ್ಲಿ ಕರೆದೊಯ್ಯುತ್ತಿದ್ದರು ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಹೇಳಿದರು.

ತುಮಕೂರಿನ ಕನ್ನಡಭವನದಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ದರೈಸ್ತ್ರಿ ಪ್ರಶಸ್ತಿ ಪ್ರದಾನ ಮಾಢಿ ಅವರು ಮಾತನಾಡಿದರು.

ಬಿ.ಕೃಷ್ಣಪ್ಪ ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇತ್ತು. ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಹಾಕಿದರು. ಪ್ರತಿ ಬಾರಿ ನನ್ನನ್ನು ಭೇಟಿ ಆಗಲು ಬಂದಾಗ ಅವರು 10 ಫೈಲುಗಳನ್ನು ಜೊತೆಯಲ್ಲಿ ತರುತ್ತಿದ್ದರು. ನೊಂದವರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಅವರಂತೆಯೇ ಬರಗೂರು ರಾಮಚಂದ್ರಪ್ಪನವರು ಚಳವಳಿಗಳಿಗೆ ಸ್ಪೂರ್ತಿ ತುಂಬುವಂತಹ ಕೆಲಸ ಮಾಡಿದರು. ಸಾಹಿತಿಯಾಗಿ, ಬಂಡಾಯ ಸಾಹಿತ್ಯ ಸಂಘಟನೆಯನ್ನು ಮುನ್ನಡೆಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಹಾಗೆಯೇ ಕತೆ-ಚಿತ್ರಕಥೆ, ಗೀತರಚನಾಕಾರರಾಗಿ ಹೆಸರು ಮಾಡಿದರು ಎಂದು ಶ್ಲಾಘಿಸಿದರು.

ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು. ಅವರೆಲ್ಲಿಯೂ ಹೆಸರು ಕೆಡಿಸಿಕೊಳ್ಳುವಂತಹ ಕೆಲಸ ಮಾಡಲಿಲ್ಲ. 

ನನ್ನ ಗುರುಗಳಾದ ಎಲ್.ಜಿ.ಹಾವನೂರ್ ಹೇಳುತ್ತಿದ್ದರು. ವ್ಯಕ್ತಿ ಹೇಗೆ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರ ಕೊಟ್ಟು ನೋಡು ಎನ್ನುತ್ತಿದ್ದರು. ಹಾಗೆಯೇ ಬರಗೂರು ರಾಮಚಂದ್ರಪ್ಪನವರಿಗೆ ಯಾವುದೇ ಹುದ್ದೆ ನೀಡಿದರೂ ಎಲ್ಲವನ್ನು ಅತ್ಯಂತ ಚನ್ನಾಗಿ ನಿರ್ವಹಿಸಿದರು. ಅವರ ಕಾಲದಲ್ಲಿ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.

ಸಾರ್ವಜನಿಕ ಜೀವನದಲ್ಲಿ ಬರಗೂರು ಎಲ್ಲಿಯೂ ಹೆಸರು ಕೆಡಿಸಿಕೊಂಡವರಲ್ಲ. ಅವರ ಕಡುವಿರೋಧಿಗಳು ಕೂಡ ಒಂದು ಮಾತನಾಡಲಿಲ್ಲ. ಈಗಲೂ ಬರಗೂರು ಅವರನ್ನು ಕಂಡರೆ ಎಲ್ಲರಿಗೂ ಗೌರವ. ರೈತರ, ದಲಿತರ ಮತ್ತು ಮಹಿಳೆಯರ ಪರವಾಗಿ ಕೆ.ಬಿ.ಸಿದ್ದಯ್ಯನವರು ಹುಟ್ಟುಹಾಕಿರುವ ದರೈಸ್ತ್ರೀ ಪ್ರಶಸ್ತಿಯನ್ನು ಸ್ವೀಕರಿಸಿರುವ ಬರಗೂರು ರಾಮಚಂದ್ರಪ್ಪನವರಿಂದ ಪ್ರಶಸ್ತಿಗೂ ಮೌಲ್ಯ ಬಂದಿದೆ ಎಂದರು.

ಬೇರೆ ಜಾತಿಗಳ ವಧು ವರರ ನಡುವೆ ಅಂತರ್ಜಾತಿ ವಿವಾಹ ನಡೆಯುವುದು ಸಾಮಾನ್ಯ. ಆದರೆ ದಲಿತರ ನಡುವೆ ಅಂತರ್ಜಾತಿ ವಿಹಾಗಳು ನಡೆಯುತ್ತಿಲ್ಲ ಎಂದು ಜಯಪ್ರಕಾಶ್ ನಾರಾಯಣ್ ಅವರು ಹೇಳುತ್ತಿದ್ದರು. ಹಾಗಾಗಿ ನಾನು ಕೆ.ಬಿ.ಸಿದ್ದಯ್ಯ ಮತ್ತು ಗಂಗರಾಜಮ್ಮ ದಲಿತರೊಳಗೆ ಅಂತರ್ಜಾತಿ ವಿವಾಹವಾದವರು ಎಂಬುದನ್ನು ಹೇಳಿ ಜೆಪಿಯಿಂದ ಶಬಾಷ್ ಗಿರಿ ಪಡೆಯುತ್ತಿದ್ದೆ ಎಂದು ತಿಳಿಸಿದರು.

ಕೆ.ಬಿ.ಸಿದ್ದಯ್ಯ ಸ್ವಾಭಿಮಾನಿಯಾಗಿದ್ದರು. ಸ್ವಯಂ ನಿಯಂತ್ರಣ ಶಕ್ತಿಯೂ ಅವರಲ್ಲಿತ್ತು. ದರೈಸ್ತ್ರಿ ಪ್ರಶಸ್ತಿ ಸ್ಥಾಪನೆ ಮಾಡಿದಾಗ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದೆವು. ಕೆ.ಬಿ. ಹಾಕಿದ ಸಸಿ ಇಂದು ಬೃಹದಾಕಾರವಾಗಿ ಬೆಳೆದು ಎಲ್ಲರಿಗೂ ನೆರಳನ್ನು ನೀಡುತ್ತಿದೆ ಎಂದು ಸ್ಮರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular