Sunday, August 2, 2026
Google search engine
Homeಮುಖಪುಟ2ಎ ಮೀಸಲಾತಿ ರಾಜಕೀಯದಲ್ಲೂ ದೊರೆಯಲಿ-ರಮೇಶ್ ಬಾಬು

2ಎ ಮೀಸಲಾತಿ ರಾಜಕೀಯದಲ್ಲೂ ದೊರೆಯಲಿ-ರಮೇಶ್ ಬಾಬು

ಬಲಿಜ ಸಮುದಾಯಕ್ಕೆ ಶೈಕ್ಷಣಿಕವಾಗಿ 2ಎ ಮೀಸಲಾತಿ ದೊರೆಯುತ್ತಿದ್ದು, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿಯೂ 2ಎ ಮೀಸಲಾತಿ ದೊರೆಯುಬೇಕೆಂಬುದು ಜನಾಂಗದ ಬಹುದಿನದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲು ಶ್ರಮಿಸುವುದಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ರಮೇಶಬಾಬು ತಿಳಿಸಿದ್ದಾರೆ.

ತುಮಕೂರು ನಗರದಲ್ಲಿ ಜಿಲ್ಲಾ ಬಲಿಜ ಸಂಘದ ವತಿಯಿಂದ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರರ 191ನೇ ವರ್ಷದ ಜೀವ ಸಮಾಧಿ ಮಹೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ 2ಎ ಮೀಸಲಾತಿಯಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ. ಇದೇ ಮೀಸಲಾತಿ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ದೊರೆತರೆ ನಮ್ಮ ಸಮುದಾಯದ ಜನರು ಸರಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಹೆಚ್ಚಲಿದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳಿಂದ ಸಂಸತ್‌ವರೆಗೆ ಸಮಾಜದ ಜನರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜು ಮಾತನಾಡಿ, ಹಿರಿಯರ ಹೋರಾಟದ ಫಲವಾಗಿ ಕೈತಪ್ಪಿದ್ದ 2ಎ ಮೀಸಲಾತಿ ಶೈಕ್ಷಣಿಕ ವಲಯದಲ್ಲಿ ದೊರಕಿದೆ. ಇದನ್ನು ಬಳಸಿಕೊಂಡು ಮಕ್ಕಳು ಒಳ್ಳೆಯ ವಿದ್ಯಾವಂತರಾಗಿ, ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಬೇಕು. ನಮ್ಮ ಸಮುದಾಯದ ಜನರು ಗ್ರಾಮೀಣ ಭಾಗದಲ್ಲಿ ತೀರ ಹಿಂದುಳಿದಿದ್ದಾರೆ. ಇಂದಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶಿಕ್ಷಣ ಕೈಗೆಟುಕಲಾರದ ಸ್ಥಿತಿಯಲ್ಲಿದೆ. ಹಾಗಾಗಿ ಸ್ಪೂರ್ತಿ ಚಿದಾನಂದ ಕನಿಷ್ಠ ಪ್ರತಿ ತಾಲೂಕಿನಲ್ಲಿ ಒಂದು ಅಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯನ್ನು ತೆರೆದು, ಸಮುದಾಯ ಮಕ್ಕಳು ಭರಿಸಬಹುದಾದ ಶುಲ್ಕದಲ್ಲಿ ಒಳ್ಳೆಯ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಮಾಡಲಿ. ಇದರಿಂದ ಲಕ್ಷಾಂತರ ತಾಯಂದಿರ ಕನಸು ನನಸಾಗಲಿದೆ ಎಂದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಸ್ಪೂರ್ತಿ ಚಿದಾನಂದ, ಸಮುದಾಯದ ವತಿಯಿಂದ ಪ್ರತಿವರ್ಷ ನಡೆಯುವ ಪ್ರತಿಭಾ ಪುರಸ್ಕಾರಕ್ಕೆ ಒಂದು ಕೋಟಿಯ ದತ್ತಿ ನೀಡಿ ಇಡುವ ಚಿಂತನೆಯಿದ್ದ, ನಮ್ಮ ಕಡೆಯಿಂದ 10 ಲಕ್ಷ ರೂಗಳ ಧೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಜಯದೇವ ಹೃದ್ರೋಗ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ.ನಟರಾಜಶೆಟ್ಟಿ ಮಾತನಾಡಿ, ಕಠಿಣ ಪರಿಶ್ರಮವೇ ನಿಮ್ಮನ್ನು ಸಾಧನೆ ಮೆಟ್ಟಿಲಿಗೆ ತೆಗೆದುಕೊಂಡು ಹೋಗುತ್ತದೆ. ನಿಮ್ಮ ಗಮನ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಇರಲಿ. ಶಿಕ್ಷಣವೆಂಬುದು ದುಬಾರಿಯಾಗಿರುವ ಈ ಕಾಲದಲ್ಲಿ ಮೇರಿಟ್ ಮೇಲೆ ನಿಮ್ಮ ಗಮನ ಇರಲಿ,ರೋಗ ಮುಕ್ತ ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಆಂಜನಪ್ಪ ಮಾತನಾಡಿ, ಶಿಕ್ಷಣ ಇಂದು ಅತಿ ಅವಶ್ಯಕವಾಗಿದೆ. ಹಾಗಾಗಿ ಪೋಷಕರು ತಮಗೆ ಎಂತಹದ್ದೇ ಕಷ್ಟವಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸರಕಾರ ಹಾಗೂ ಸಂಘ ಸಂಸ್ಥೆಗಳು ನಿಮ್ಮ ಜೊತೆ ಕೈಜೋಡಿಸಲಿವೆ. ಹಾಗೆಯೆ ಸಮುದಾಯವೂ ಸಹ ಪ್ರತಿಭಾವಂತರ ವಿದ್ಯಾಭ್ಯಾಸಕ್ಕೆ ಕೈಜೋಡಿಸಲಿದೆ. ತಾವು ಒಳ್ಳೆಯ ಗುರಿಯೊಂದಿಗೆ ಮುನ್ನೆಡೆದರೆ ಎಲ್ಲವೂ ಸಾಧ್ಯ ಎಂದರು.

ಜಿಲ್ಲಾ ಬಲಿಜ ಸಂಘದ ಕಾರ್ಯದರ್ಶಿ ಟಿ.ಆರ್.ಹೆಚ್ ಪ್ರಕಾಶ್, ಹಿರಿಯ ಲೇಖಕ ಎಂ.ಡಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷರುಗಳಾದ ಶಂಕರಪ್ಪ, ಪದ್ಮನಾಭ್, ಶಂಕರನಾರಾಯಣ, ರಾಮಚಂದ್ರಪ್ಪ, ಶ್ರೀರಂಗಪ್ಪ, ನಂಜುಂಡಪ್ಪ, ಲಕ್ಷ್ಮಣಪ್ಪ, ಎನ್.ಪದ್ಮನಾಭ್, ವಿಶ್ವನಾಥ್, ಎಸ್.ಎಸ್.ರಂಗನಾಥ್, ಗಿರೀಶ್, .ಪ್ರಕಾಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular