12ನೇ ಶತಮಾನದ ಪ್ರಮುಖ ವಚನಕಾರ, ಮಹಾಮಾನವಮೂರ್ತಿ ಬಸವಣ್ಣನ ಆಯ್ದ ವಚನಗಳನ್ನು ಮಹಿಳೆಯರಿಬ್ಬರು ಪ್ರಾರ್ಥನೆಯನ್ನಾಗಿ ಹಾಡಿದ್ದು ಡಾ.ಶಿವಕುಮಾರ ಶ್ರೀಗಳ 115ನೇ ಜಯಂತೋತ್ಸವ ಮತ್ತು ಗುರುವಂದನಾ ಸಮಾರಂಭದಲ್ಲಿ ಭಕ್ತರು ಸೇರಿದಂತೆ ಎಲ್ಲರ ಗಮನ ಸೆಳೆಯಿತು.
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವ.
ಪ್ರಾರ್ಥನೆ ಮಾಡಿದ ಮಹಿಳೆಯರಿಬ್ಬರು ವಚನಗಳು ಹಾಡಿದ್ದು ಪ್ರಸ್ತುತ ಸನ್ನಿವೇಶಕ್ಕೆ ಹಿಡಿದಂತೆ ಇತ್ತು.