ಡಾ.ಶಿವಕುಮಾರ ಶ್ರೀಗಳ 115ನೇ ಜಯಂತೋತ್ಸವ ಕಾರ್ಯಕ್ರಮ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದು ಇಡೀ ಸಿದ್ದಗಂಗಾ ಮಠದ ಆವರಣದ ತುಂಬ ಬಿಜೆಪಿ ಬಾವುಟಗಳು, ಅಮಿತ್ ಶಾ ಅವರ ಕಟೌಟ್ ಗಳು ರಾರಾಜಿಸುತ್ತಿವೆ.
ಕಾರ್ಯಕ್ರಮ ಆರಂಭಗೊಳ್ಳುವ ಮುನ್ನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಪ್ರಕಟಣೆ ಮಾಡಿದ್ದು ಗಮನ ಸೆಳೆಯಿತು. ಭಕ್ತಾದಿಗಳಲ್ಲಿ ಒಂದು ವಿನಂತಿ ಯಾವುದೇ ಕಾರಣಕ್ಕೂ ವೈಯಕ್ತಿಕ ಘೋಷಣೆಗಳನ್ನು ಕೂಗಬಾರದು. ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೊಂದು ಅಭೂತಪೂರ್ವ ಕಾರ್ಯಕ್ರಮ, ಐತಿಹಾಸಿಕ ಕಾರ್ಯಕ್ರಮ, ಭಕ್ತರದಲ್ಲಿ ಕೈಮುಗಿದು ಪ್ರಾರ್ಥಿಸುತ್ತೇನೆ. ವೈಯಕ್ತಿಕ ಘೋಷಣೆ ಕೂಗಬಾರದು. ವಿಜಯೇಂದ್ರಣ್ಣ ಮತ್ತು ಮೊತ್ತೊಬ್ಬರ ಪರವಾಗಿ ಘೋಷಣೆಗಳನ್ನು ಕೂಗಬಾರದು. ವೈಯಕ್ತಿಕ ಘೋಷಣೆಗಳನ್ನು ಹಾಕಬಾರದು. ಇದೊಂದು ಐತಿಹಾಸಿಕ ಕಾರ್ಯಕ್ರಮ. ನಿಮ್ಮ ಊರುಗಳಿಗೆ ಬಂದಾಗ ಘೋಷಣೆ ಹಾಕುವುದು ಮಾಡಿ, ಈಗ ಬೇಡ ಎಂದು ಭಕ್ತರಲ್ಲಿ ಮನವಿ ಮಾಡಿದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು.