Monday, September 16, 2024
Google search engine
Homeಇತರೆಪಾವಗಡದಲ್ಲಿ ಖಾಸಗಿ ಬಸ್ ಅಪಘಾತ - 9 ಮಂದಿ ಸಾವು

ಪಾವಗಡದಲ್ಲಿ ಖಾಸಗಿ ಬಸ್ ಅಪಘಾತ – 9 ಮಂದಿ ಸಾವು

ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಎಸ್.ವಿ.ಟಿ ಬಸ್ ವೀರಮ್ಮನಹಳ್ಳಿ ಬಿಟ್ಟು ಪಳವಳ್ಳಿ ಕೆರೆಯ ಕಟ್ಟೆ ಏರುವ ಆರಂಭದಲ್ಲೇ ದುರಂತ ಸಂಭವಿಸಿದೆ. ಬಸ್ ನಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಸ್ಥಳೀಯ ತಿಳಿಸಿದ್ದಾರೆ.

ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಅಪಘಾತ ಸಂಭವಿಸಿ 9ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 19ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಪಳವಳ್ಳಿ ಕೆರೆಕಟ್ಟೆಯ ಬಳಿ ನಡೆದಿದೆ.

ವೈ.ಎನ್.ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಎಸ್.ವಿ.ಟಿ ಬಸ್ ವೀರಮ್ಮನಹಳ್ಳಿ ಬಿಟ್ಟು ಪಳವಳ್ಳಿ ಕೆರೆಯ ಕಟ್ಟೆ ಏರುವ ಆರಂಭದಲ್ಲೇ ದುರಂತ ಸಂಭವಿಸಿದೆ. ಬಸ್ ನಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು ಸ್ಥಳೀಯ ತಿಳಿಸಿದ್ದಾರೆ.

ಭೀಕರ ಬಸ್ ದುರಂತದಲ್ಲಿ ವೀರಮ್ಮನಹಳ್ಳಿಯ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು ಅಮೂಲ್ಯ, ಕಲ್ಯಾಣ್, ಶಾನ್ವಾಜ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.

ದುರಂತದಲ್ಲಿ ಗಂಭೀರ ಗಾಯಗೊಂಡವರನ್ನು ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವವರಿಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular