Thursday, September 19, 2024
Google search engine
Homeಮುಖಪುಟತುಮಕೂರಿನಲ್ಲಿ ಹೆಂಡತಿ ಕಾಲು ಕತ್ತರಿಸಿ ಜೈಲು ಪಾಲಾದ ಗಂಡ

ತುಮಕೂರಿನಲ್ಲಿ ಹೆಂಡತಿ ಕಾಲು ಕತ್ತರಿಸಿ ಜೈಲು ಪಾಲಾದ ಗಂಡ

ಈ ಸಂದರ್ಭದಲ್ಲಿ ಪತಿ ಬಾಬು ಮತ್ತು ಪತ್ನಿ ಅನಿತಾರ ನಡುವೆ ಕುಟುಂಬದ ವಿಷಯವಾಗಿ ಮಾತಿಗೆ ಮಾತು ಬೆಳೆದು ತಾರಕಕ್ಕೆ ಹೋಗಿದೆ. ಇದರಿಂದ ಕೋಪಗೊಂಡ ಪತಿ ಬಾಬು ಪತ್ನಿ ಅನಿತಾರ ಕಾಲನ್ನು ಕತ್ತರಿಸಿ ಹಾಕಿದ್ದಾರೆ ಎಂದು ಹೇಳಲಾಗಿದೆ.

ಕೌಟುಂಬಿಕ ವಿಷಯವಾಗಿ ಜಗಳ ನಡೆದು ಗಂಡನೊಬ್ಬ ಹೆಂಡತಿಯ ಕಾಲು ಕತ್ತರಿಸಿ ಜೈಲು ಪಾಲಾಗಿರುವ ಘಟನೆ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಗದಗ ಜಿಲ್ಲೆ ಬಡಗೇರಿ ಹೋಬಳಿಯ ಪಾಪನಾಶಿನಿ ತಾಂಡಾದ ವಾಸಿ ಬಾಬು ಮಾರ್ಚ್ 16ರಂದು ಬೆಳಗ್ಗೆ ತನ್ನೂರಿನಿಂದ ಬಂದು ತುಮಕೂರಿನ ಅಶೋಕ ಹೋಟೆಲ್ ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು ಎನ್ನಲಾಗಿದೆ.

ಹೋಟೆಲ್ ನಲ್ಲಿದ್ದಾಗ ಪತ್ನಿ ಅನಿತಾ ಅವರಿಗೆ ಕರೆ ಮಾಡಿದ ಬಾಬು ತುಮಕೂರಿನ ಅಶೋಕ ಹೋಟೆಲ್ ಗೆ ಬರುವಂತೆ ತಿಳಿಸಿದ್ದಾರೆ. ಪತಿಯ ಕರೆಯಂತೆ ಅನಿತಾ ಹೋಟೆಲ್ ಗೆ ಬಂದಿದ್ದಾರೆ. ತಿಂಡಿ ತರಿಸಿಕೊಂಡು ಗಂಡ-ಹೆಂಡತಿ ಇಬ್ಬರು ತಿಂದಿದ್ದಾರೆ.

ಈ ಸಂದರ್ಭದಲ್ಲಿ ಪತಿ ಬಾಬು ಮತ್ತು ಪತ್ನಿ ಅನಿತಾರ ನಡುವೆ ಕುಟುಂಬದ ವಿಷಯವಾಗಿ ಮಾತಿಗೆ ಮಾತು ಬೆಳೆದು ತಾರಕಕ್ಕೆ ಹೋಗಿದೆ. ಇದರಿಂದ ಕೋಪಗೊಂಡ ಪತಿ ಬಾಬು ಪತ್ನಿ ಅನಿತಾರ ಕಾಲನ್ನು ಕತ್ತರಿಸಿ ಹಾಕಿದ್ದಾರೆ ಎಂದು ಹೇಳಲಾಗಿದೆ.

ಬಳಿಕ ಬಾಬು, ಹೋಟೆಲ್ ಮಾಲಿಕರಿಗೆ ಕರೆ ಮಾಡಿ ನನ್ನ ಹೆಂಡತಿಯ ಕಾಲು ಕತ್ತರಿಸಿದ್ದೇನೆ. ನಾಲ್ವರು ಸಿಬ್ಬಂದಿಯನ್ನು ಕಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ವಿಷಯ ತಿಳಿಸಿದ್ದಾರೆ.

ಈ ವಿಷಯ ಹರಡುತ್ತಿದ್ದಂತೆ ತುಮಕೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಬಾಬು ಅವರನ್ನು ಬಂಧಿಸಿದ್ದಾರೆ. ಆರೋಪಿ ಬಾಬು ಕಾರು ಚಾಲಕನಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿತಾ ಅವರು ಮಧುಗಿರಿಯ ಜುಟಪಿಟರ್ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular