Sunday, March 15, 2026
Google search engine
Homeಆರ್ಥಿಕರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ - ಜಿಎಸ್.ಟಿ ದರ ಹೆಚ್ಚಿಸುವ ನಿರ್ಧಾರಕ್ಕೆ ತಡೆ

ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ – ಜಿಎಸ್.ಟಿ ದರ ಹೆಚ್ಚಿಸುವ ನಿರ್ಧಾರಕ್ಕೆ ತಡೆ

ಒಂದು ಸಾವಿರ ರೂಪಾಯಿ ಒಳಗೆ ಖರೀದಿಸುವ ವಸ್ತುಗಳು ಸೇರಿದಂತೆ ಪಾದಕ್ಷೆಗಳಿಗೆ ಜಿಎಸ್.ಟಿ. ದರ ಹೆಚ್ಚಿಸುವುದಕ್ಕೆ ರಾಜ್ಯಗಳು ಒಪ್ಪಿಗೆ ನೀಡಲಿಲ್ಲ. ಜಿಎಸ್.ಟಿ. ದರವನ್ನು ತರ್ಕಬದ್ಧಗೊಳಿಸುವುದನ್ನು ಎದುರು ನೋಡುತ್ತಿರುವ ರಾಜ್ಯ ಹಣಕಾಸು ಸಚಿವರ ಗುಂಪಿಗೆ ಜವಳಿ ಮೇಲಿನ ತೆರಿಗೆ ದರವನ್ನು ಪರಿಶೀಲಿಸುವಂತೆ ಕೇಳಲಾಗಿದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳ ಒತ್ತಡಕ್ಕೆ ಜಿಎಸ್.ಟಿ ಕೌನ್ಸಿಲ್ ಜವಳಿ ಮೇಲಿನ ತೆರಿಗೆ ದರವನ್ನು ಶೇ.5ರಿಂದ ಶೇ.12ಕ್ಕೆ ಹೆಚ್ಚಿಸುವ ನಿರ್ಧಾರವನ್ನು ತಡೆಹಿಡಿದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜನವರಿ 1ರಿಂದ ಜವಳಿ ಮೇಲಿನ ಜಿಎಸ್.ಟಿ. ತೆರಿಗೆ ದರಗಳಲ್ಲಿ ಹೆಚ್ಚಳ ಮಾಡುವುದನ್ನು ಮುಂದೂಡುವಂತೆ ಹಲವು ರಾಜ್ಯಗಳು ಮನವಿ ಮಾಡಿದ ಬಳಿಕ ಪರೋಕ್ಷ ತೆರಿಗೆಗಳ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಮಿತಿ ತುರ್ತು ನಿಂಬಂಧನೆಗಳ ಅಡಿಯಲ್ಲಿ ಸಭೆ ಸೇರಿ ಈ ತೀರ್ಮಾನ ಕೈಗೊಂಡಿದೆ.

ಒಂದು ಸಾವಿರ ರೂಪಾಯಿ ಒಳಗೆ ಖರೀದಿಸುವ ವಸ್ತುಗಳು ಸೇರಿದಂತೆ ಪಾದಕ್ಷೆಗಳಿಗೆ ಜಿಎಸ್.ಟಿ. ದರ ಹೆಚ್ಚಿಸುವುದಕ್ಕೆ ರಾಜ್ಯಗಳು ಒಪ್ಪಿಗೆ ನೀಡಲಿಲ್ಲ. ಜಿಎಸ್.ಟಿ. ದರವನ್ನು ತರ್ಕಬದ್ಧಗೊಳಿಸುವುದನ್ನು ಎದುರು ನೋಡುತ್ತಿರುವ ರಾಜ್ಯ ಹಣಕಾಸು ಸಚಿವರ ಗುಂಪಿಗೆ ಜವಳಿ ಮೇಲಿನ ತೆರಿಗೆ ದರವನ್ನು ಪರಿಶೀಲಿಸುವಂತೆ ಕೇಳಲಾಗಿದೆ.

ಮುಂದಿನ ವರ್ಷ ಫೆಬ್ರವರಿಯೊಳಗೆ ವರದಿಯನ್ನು ಸಲ್ಲಿಸುವಂತೆ ರಾಜ್ಯ ಹಣಕಾಸು ಸಚಿವರ ಗುಂಪಿಗೆ ತಿಳಿಸಲಾಗಿದೆ. ಪ್ರಸ್ತುತ ಮಾನವ ನಿರ್ಮಿತ ಫೈಬರ್ ಮೇಲಿನ ತೆರಿಗೆ ದರವು 18%, ನೂಲು 12% ಇದ್ದು, ಬಟ್ಟೆಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular