ಯಾವುದೇ ವ್ಯಕ್ತಿಯ ವಿರುದ್ಧ 15 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಭ್ರಷ್ಟಾಚಾರದ ಆರೋಪವಿದ್ದರೆ ಮಾತ್ರ ನನ್ನನ್ನು ಸಂಪರ್ಕಿಸಿ ಎಂದು ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಹೇಳಿದ್ದು ವಿವಾದವನ್ನು ಮೇಲೆಳೆದುಕೊಂಡಿದ್ದಾರೆ.
ಮಧ್ಯಪ್ರದೇಶದ ರೇವಾದಲ್ಲಿ ಮಾತನಾಡಿರುವ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ‘ನಾನು ಹಾಸ್ಯಮಯವಾಗಿ ಅವರಿಗೆ ಹೇಳುತ್ತೇನೆ. 15 ಲಕ್ಷ ರೂಪಾಯಿವರೆಗೆ ಭ್ರಷ್ಟಾಚಾರದ ಆರೋಪವಿದ್ದರೆ ನನ್ನ ಬಳಿ ಬರಬೇಡ. 15 ಲಕ್ಷ ರೂಪಾಯಿ ಮೇಲೆ ಭ್ರಷ್ಟಾಚಾರದ ಆರೋಪವಿದ್ದರೆ ಮಾತ್ರ ಬನ್ನಿ’ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ಎಎನ್ಐ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.
ಪ್ರಸ್ತುತ ಸಾವಲುಗಳನ್ನು ಎದುರಿಸುವಲ್ಲಿ ಮಾಧ್ಯಮಗಳ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಮಿಶ್ರಾ ಸರಪಂಚರ ಭ್ರಷ್ಟಾಚಾರದ ಕುರಿತು ಹೇಳಲು ಜನರು ನನ್ನ ಬಳಿ ಬರುತ್ತಾರೆ. ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಲು 7 ಲಕ್ಷ ರೂ ಬೇಕು. ಮುಂದಿನ ಚುನಾವಣೆಗೆ 7 ಲಕ್ಷ ರೂ ಬೇಕು. ಹೆಚ್ಚುತ್ತಿರುವ ಹಣದುಬ್ಬರದ ದೃಷ್ಟಿಯಿಂದ ಮತ್ತೆ 1 ಲಕ್ಷ ರೂ ಬೇಕು’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ ಜಿಲ್ಲಾ ನ್ಯಾಯಾಲಯ ತೆರಿಗೆ ವಂಚನೆ ಪ್ರಕರಣದಲ್ಲಿ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಒಂದು ದಿನದ ಬಳಿಕ ಮಿಶ್ರಾ ಅವರಿಂದ ಈ ಹೇಳಿಕೆಗಳು ಬಂದಿವೆ.
ಜೈನ್ ಮತ್ತು ಮಿಶ್ರಾ ಸಂಬಂಧವನ್ನು ಹೊಂದಿದ್ದಾರೆ ಎಂದು ಸಮಾಜವಾದಿ ಪಕ್ಷ ದೂರಿದ್ದರೆ ಬಿಜೆಪಿ ಪ್ರತ್ಯಾರೋಪ ಮಾಡಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.


