Monday, March 16, 2026
Google search engine
Homeಚಳುವಳಿಗೃಹ ಸಚಿವಾಲಯದ ಪ್ರಸ್ತಾವಕ್ಕೆ ಸ್ಪಷ್ಟೀಕರಣ ಕೋರಿದ ಸಂಯುಕ್ತ ಕಿಸಾನ್ ಮೋರ್ಚಾ

ಗೃಹ ಸಚಿವಾಲಯದ ಪ್ರಸ್ತಾವಕ್ಕೆ ಸ್ಪಷ್ಟೀಕರಣ ಕೋರಿದ ಸಂಯುಕ್ತ ಕಿಸಾನ್ ಮೋರ್ಚಾ

"700 ಕ್ಕೂ ಹೆಚ್ಚು ಮೃತ ರೈತರ ಕುಟುಂಬಗಳಿಗೆ ಪರಿಹಾರಕ್ಕಾಗಿ, ಕೇಂದ್ರವು ಪಂಜಾಬ್ ಮಾದರಿ ಅನುಸರಿಸಬೇಕೆಂದು ನಾವು ಬಯಸುತ್ತೇವೆ. 5 ಲಕ್ಷ ರೂ ಪರಿಹಾರ ಮತ್ತು ಪಂಜಾಬ್ ಸರ್ಕಾರ ಘೋಷಿಸಿದ ಉದ್ಯೋಗವನ್ನು ಭಾರತ ಸರ್ಕಾರವೂ ಜಾರಿ ಮಾಡಬೇಕು" ಎಂದು ಚಾರುಣಿ ಹೇಳಿದರು.

ಪ್ರತಿಭಟನೆಯನ್ನು ಕೈಬಿಡುವಂತೆ ಗೃಹ ಸಚಿವಾಲಯದ ಪ್ರಸ್ತಾವನೆಯನ್ನು ಸ್ವೀಕರಿಸಿದ ಒಂದು ದಿನದ ನಂತರ ದೋಷಗಳು ಮತ್ತು ತಿದ್ದುಪಡಿಗಳನ್ನು ಉಲ್ಲೇಖಿಸಿ ಪ್ರಸ್ತಾವವನ್ನು ವಾಪಸ್ ಕಳಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಹಲವು ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕೋರಿದೆ.

ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಐದು ಸದಸ್ಯರ ಸಮಿತಿಯನ್ನು ರಚಿಸಿದ್ದು, ಈ ವಿಷಯದ ಬಗ್ಗೆ ಸರ್ಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಮಿತಿಯ ಸದಸ್ಯ ಅಶೋಕ್ ಧಾವಳೆ, ಸರ್ಕಾರ ಮಾತುಕತೆಗೆ ಸಿದ್ಧವಾಗಿದೆ ಮತ್ತು ಲಿಖಿತವಾಗಿ ಏನನ್ನಾದರೂ ನೀಡುತ್ತಿದೆ ಎಂದು ನಾವು ಶ್ಲಾಘಿಸುತ್ತೇವೆ. ಆದರೆ ಪ್ರಸ್ತಾವನೆಯಲ್ಲಿ ಕೆಲವು ನ್ಯೂನತೆಗಳಿವೆ, ಆದ್ದರಿಂದ ಅದನ್ನು ಕೆಲವು ತಿದ್ದುಪಡಿಗಳೊಂದಿಗೆ ಹಿಂತಿರುಗಿಸಿದ್ದೇವೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

ರೈತ ಸಂಘದ ಸದಸ್ಯರನ್ನು ಒಳಗೊಂಡಂತೆ ಕನಿಷ್ಠ ಬೆಂಬಲ ಬೆಲೆ ಕೇಂದ್ರಿತ ಸಮಿತಿಯ ರಚನೆ ಅಗತ್ಯವಿದೆ. ಜೊತೆಗೆ ಪ್ರತಿಭಟನೆ ವಾಪಸ್ ಪಡೆದ ನಂತರ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಸರ್ಕಾರ ಹೇಳಿದೆ. ಇದು ತಪ್ಪು. ನಾವು ಇಲ್ಲಿ ಚಳಿಯಲ್ಲಿ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ” ಎಂದು ಹೇಳಿದರು.

ನಮಗೆ ಪಂಜಾಬ್ ಮಾದರಿ ಅಗತ್ಯವಿದೆ. ಅವರು ವಿದ್ಯುತ್ ಮಸೂದೆ ಹಿಂಪಡೆಯುವುದಾಗಿ ಭರವಸೆ ನೀಡಿದರು, ಆದರೆ ಈಗ ಅವರು ಅದನ್ನು ಚರ್ಚಿಸಲು ಬಯಸುತ್ತಾರೆ.

“700 ಕ್ಕೂ ಹೆಚ್ಚು ಮೃತ ರೈತರ ಕುಟುಂಬಗಳಿಗೆ ಪರಿಹಾರಕ್ಕಾಗಿ, ಕೇಂದ್ರವು ಪಂಜಾಬ್ ಮಾದರಿ ಅನುಸರಿಸಬೇಕೆಂದು ನಾವು ಬಯಸುತ್ತೇವೆ. 5 ಲಕ್ಷ ರೂ ಪರಿಹಾರ ಮತ್ತು ಪಂಜಾಬ್ ಸರ್ಕಾರ ಘೋಷಿಸಿದ ಉದ್ಯೋಗವನ್ನು ಭಾರತ ಸರ್ಕಾರವೂ ಜಾರಿ ಮಾಡಬೇಕು” ಎಂದು ಚಾರುಣಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular