ಓರ್ವ ಸೇನಾಧಿಕಾರಿ ಸೇರಿದಂತೆ ಐವರು ಭಾರತೀಯ ಯೋಧರು ಉಗ್ರರ ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿರುವ ಘಟನೆ ಜಮ್ಮ-ಕಾಶ್ಮೀರದ ಪೂಂಚ್ ಜಿಲ್ಲೆಯ ಡೆಹ್ರಕಿ ಗಾಲ ಪ್ರದೇಶದಲ್ಲಿ ನಡೆದಿದೆ ಎಂದು ಸೇನಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೆಂದರ್ ಆನಂದ್ ತಿಳಿಸಿದ್ದಾರೆ.
ನಾಲ್ವರಿಂದ ಐದು ಮಂದಿ ಅಧಿಕ ಪ್ರಮಾಣದ ಶಸ್ತ್ರಸಜ್ಜಿತ ಉಗ್ರರು ಪೂಂಚ್ ನ ಡೆಹ್ರಕಿಗಾಲ ಗಡಿಯಲ್ಲಿ ದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದರು. ಹಾಗ ಭದ್ರತಾಪಡೆಗಳು ಗುಂಡಿನ ದಾಳಿ ನಡೆಸಿವೆ. ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ ಐವರು ಭಾರತೀಯ ಯೋಧರು ಮೃತಪಟ್ಟಿದ್ದಾರೆ.
ಉಗ್ರರು ಮತ್ತು ಭಾರತದ ಭದ್ರತಾಪಡೆಗಳ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ಗುಪ್ತಚರ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಉಗ್ರರ ವಿರುದ್ಧ ಕೂಂಬಿಂಗ್ ನಡೆಯುತ್ತಿದೆ.
ಮತ್ತೊಂದು ಕಡೆ ಪೂಂಚ್ ನ ಮುಘಲ್ ರಸ್ತೆಯಲ್ಲಿ ಉಗ್ರರನ್ನು ಸುತ್ತುವರಿದಿರುವ ಭದ್ರತಾಪಡೆಗಳು ಅವರನ್ನು ಸೆರೆಹಿಡಿಯಲು ಇಲ್ಲವೇ ಹತ್ಯೆಗೈಯಲು ತಯಾರಿ ನಡೆಸಿವೆ.
ಇತ್ತೀಚಿನ ವಾರಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆ ಮತ್ತು ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣರೇಖೆಯಲ್ಲಿ ಕಚನವಿರಾಮ ಉಲ್ಲಂಘನೆ ಹೆಚ್ಚುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.