Saturday, October 19, 2024
Google search engine
Homeಮುಖಪುಟರೈತ ಕುಟುಂಬಗಳಿಗೆ ಸಾಂತ್ವನ ಹೇಳಿದ ರಾಹುಲ್

ರೈತ ಕುಟುಂಬಗಳಿಗೆ ಸಾಂತ್ವನ ಹೇಳಿದ ರಾಹುಲ್

ಲಖಿಂಪುರಖೇರಿಯಲ್ಲಿ ವಾಹನ ಹರಿದು ಹತ್ಯೆಗೀಡಾದ ರೈತ ಕುಟುಂಬಗಳ ಸದಸ್ಯರನ್ನು ಭೇಟಿ ಮಾಡಿದ ಎಐಸಿಸಿ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಗಾಂಧಿ ನೇತೃತ್ವದ ತಂಡ ಸಾಂತ್ವನ ಹೇಳಿತು. ರಾಹುಲ್ ಮೃತ ರೈತ ಕುಟುಂಬದ ಸದಸ್ಯರನ್ನು ಅಪ್ಪಿಕೊಂಡು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿದರು.

ಎಸ್.ಯು.ವಿ ವಾಹನ ಹರಿಸಿ ಹತ್ಯೆಯಾದ ಪತ್ರಕರ್ತ ರಮಣ್ ಕಶ್ಯಪ್ ಕುಟುಂಬದ ಸದಸ್ಯರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚೆನ್ನಿ, ಮುಖ್ಯಮಂತ್ರಿ ಭೂಪೇಶ್ ಭಾಗೆಲ್ ಇದ್ದರು.

ಲವ್ ಪ್ರೀತ್ ಸಿಂಗ್ ತಂದೆ ಸ್ಯಾಟ್ ನಾಮ್ ಸಿಂಗ್ ನಿವಾಸಕ್ಕೆ ತೆರಳಿದ ರಾಹುಲ್ ತಂಡ ಸಾಂತ್ವನ ಹೇಳಿದೆ. “ಕುಟುಂಬದ ಸದಸ್ಯರು “ನಾವು ನಿಮ್ಮ ಜೊತೆಗಿದ್ದೇವೆ. ನ್ಯಾಯ ಕೊಡಿಸುತ್ತೇವೆ. ಸಚಿವರ ರಾಜಿನಾಮೆ ಮತ್ತು ಅವರ ಪುತ್ರನ ಬಂಧನದಿಂದ ನ್ಯಾಯ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದರೆಂದು ಮಾಧ್ಯಮಗಳು ವರದಿ ಮಾಡಿವೆ.

ಇಂದು ಕಾಂಗ್ರೆಸ್ ನಾಯಕರ ತಂಡ ಭಾನುವಾರ ಲಖಿಂಪುರದಲ್ಲಿ ವಾಹನ ಹರಿದು ಮೃತಪಟ್ಟ ರೈತ ಗುರುವಿಂದರ್ ಸಿಂಗ್(18), ದಿಲ್ ಜಿತ್ ಸಿಂಗ್ (35) ಕುಟಂಬದ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ನಾನು ಹೇಗೆ ಚಲಿಸಬೇಕು ಎಂದು ನೀವು ನಿರ್ಧರಿಸುತ್ತೀರಾ? ಈ ದೇಶದ ನಿಯಮವನ್ನು ಹೇಳಿ, ನೀವು ಈ ಮಾರ್ಗದ ಮೂಲಕ ಹೋಗಬೇಕು ಎಂದು ನೀವು ನಾಗರಿಕರಿಗೆ ಹೇಳಬಹುದು’ ಎಂದು ರಾಹುಲ್ ಗಾಂಧಿ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular