‘ನಕಲಿ ಹಿಂದುತ್ವ ವಂಚಕ’ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಬಹಿಷ್ಕರಿಸಬೇಕು. ಪ್ರತಿಯೊಬ್ಬ ಹಿಂದೂಗಳು ಕೂಡ ಆರ್.ಎಸ್.ಎಸ್. ಮುಕ್ತ ಭಾರತಕ್ಕೆ ಕೆಲಸ ಮಾಡಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಎಂ.ನಾಗೇಶ್ವರ ರಾವ್ ಕರೆ ನೀಡಿದ್ದಾರೆ.
“ಆರ್ಎಸ್ಎಸ್ ಇಸ್ಲಾಮಿಗೆ ಧೈರ್ಯ ನೀಡುತ್ತಿದೆ ಮತ್ತು ಹಿಂದುಗಳನ್ನು ಮತ್ತು ಹಿಂದೂ ಧರ್ಮವನ್ನು ವಿನಾಶದ ಸುವರ್ಣ ಮಾರ್ಗದಲ್ಲಿ ಕೊಂಡೊಯ್ಯುತ್ತಿದೆ”. ಇಸ್ಲಾಂ “ಗೆಲ್ಲುತ್ತದೆ” ಏಕೆಂದರೆ ಅದು “ಬಗ್ಗದ ಮನಸ್ಸನ್ನು” ಸೃಷ್ಟಿಸುತ್ತದೆ ಎಂದು ರಾವ್ ಸರಣಿ ಟ್ವೀಟ್ ಗಳ ಮೂಲಕ ಆರ್.ಎಸ್.ಎಸ್. ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
“ಸ್ವಾಮಿ ಅಗ್ನಿವೇಶ್ ಒಳ್ಳೆಯ ವ್ಯಕ್ತಿತ್ವವುಳ್ಳವರು. ನಿಜವಾದ ಕಾವಿಧಾರಿ. ನೀವು ಕೇಸರಿ ಬಟ್ಟೆ ಧರಿಸುವ ಹಿಂದೂ ವಿರೋಧಿ. ನೀವು ಹಿಂದೂ ಧರ್ಮಕ್ಕೆ ಅಪಾರ ಹಾನಿ ಮಾಡಿದ್ದೀರಿ. ನಾನು ತೆಲುಗು ಬ್ರಾಹ್ಮಣನಾಗಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತದೆ. ಯಮರಾಜ್ ವಿರುದ್ಧ ನನ್ನ ಕುಂದುಕೊರತೆಯೆಂದರೆ ಅವನು ಯಾಕೆ ಇಷ್ಟು ದಿನ ಕಾಯುತ್ತಿದ್ದಾನೆ? ಎಂದು ರಾವ್ ಟ್ವೀಟ್ ಮಾಡಿದ್ದಾರೆ.
“ನಾವು ಅವರಿಗೆ ಪರ್ಯಾಯಗಳನ್ನು ನಿರ್ಮಿಸುವ ಬದಲು ವಸಾಹತುಶಾಹಿ ಬ್ರಿಟಿಷರಿಂದ ಸ್ವಾಂತ್ರ್ಯಕ್ಕಾಗಿ ಏಕೆ ಹೋರಾಡಿದೆವು. ಕಾರಣ ಪರ್ಯಾಯಗಳು ಏಕಸ್ವಾಮ್ಯದ ಪರಿಸರದಲ್ಲಿ ವಿಶೇಷವಾಗಿ ಊಹೆಯಂತೆ ಕೆಲಸ ಮಾಡುವುದಿಲ್ಲ. ಬದಲಾವಣೆಗೆ ಅಡ್ಡಿಪಡಿಸುವ ಆರ್.ಎಸ್.ಎಸ್. ಮುಕ್ತ ಭಾರತದಿಂದ ಮಾತ್ರ ಹಿಂದೂ ಸಮಾಜವನ್ನು ಉಳಿಸಬಹುದು” ಎಂದು ಹೇಳಿದ್ದಾರೆ.
“ಹೌದು ಒಳ್ಳೆಯ ಮನಸ್ಸಿನ ಹಿಂದೂಗಳು ಆರ್.ಎಸ್ಎಸ್.ಗೆ ಸೇರುತ್ತಾರೆ. ಅದು ಹಿಂದೂಳಿಗೆ ಕೆಲಸ ಮಾಡುತ್ತದೆ ಎಂದು ಭಾವಿಸುತ್ತಾರೆ. ಆದರೆ ಅದರ ಡಿಎನ್ಎ ನೋಡಿದರೆ ಹುಸಿ ಹಿಂದುತ್ವ ಹಿಂದೂ ವಿರೋಧಿ ಗಡಿಯಲ್ಲಿ ಅತ್ಯಂತ ಮಾರಕವಾದ ಪರಿವರ್ತನೆಯ ಬಗ್ಗೆ ಅವರು ಮರೆತಿದ್ದಾರೆ. ಆದ್ದರಿಮದ ಆರ್.ಎಸ್.ಎಸ್ ಮುಕ್ತ ಭಾರತದಿಂದ ಹಿಂದೂ ಧರ್ಮವನ್ನು ಉಳಿಸುವುದು ಅನಿವಾರ್ಯವಾಗಿದೆ” ಎಂದು ತಿಳಿಸಿದ್ದಾರೆ.
ಅಬ್ರಾಹ್ಮಣ್ಯವನ್ನು ವಿರೋಧಿಸುವುದು ಮಾತ್ರವಲ್ಲ ಅದನ್ನು ತಿರಸ್ಕರಿಸಿದ ವಿಜ್ಞಾನಿಗಳ ಉದಾಹರಣೆಗಳನ್ನು ನೀಡುವ ಮೂಲಕ ಅದನ್ನು ಸಮರ್ಥಿಸುವುದು ವಿಚಿತ್ರವಾಗಿದೆ. ಅವರು ಜೀವನದಲ್ಲಿ ಹೆದರುತ್ತಿದ್ದರು ಮತ್ತು ನಿರಂತರ ವಿಚಾರಣೆಯ ಭಯದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.
ರಸ್ತೆಗಳು, ಸಾರ್ವಜನಿಕ ಸ್ಥಳಗಳಿಗೆ ಅಕ್ರಮಣಕಾರರ ಹೆಸರುಗಳನ್ನು ಇಡಲಾಗಿದೆ. ದೆಹಲಿಯ ಮೂಲ ನಿರ್ಮಾಪಕರಾದ ಕೃಷ್ಣ ಮತ್ತು ಪಾಂಡವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂಬ ಅಂಶವನ್ನು ರಾವ್ ಉಲ್ಲೇಖಿಸಿದ್ದಾರೆ.