ಹಂದಿ ಜೋಗಿ ಸಮುದಾಯವು ಪರಿಶಿಷ್ಚ ಜಾತಿಯ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯವಾಗಿದ್ದು ಶಿಕ್ಷಣ ಪಡೆಯುವುದು ಸಾಧ್ಯವಾಗದೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಒಂದು ಕಡೆ ನೆಲೆನಿಂತು ಶಿಕ್ಷಣ ಪಡೆದರೆ ಮಾತ್ರ ನಮ್ಮ ಸಮುದಾಯದ ಬೆಳವಣಿಗೆಯಾಗಲು ಸಾಧ್ಯ. ಇಲ್ಲವಾದರೆ ಇತರೆ ಸಮುದಾಯದವರು ನಮ್ಮ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ ಅಖಿಲ ಕರ್ನಾಟಕ ಹಂದಿಜೋಗಿಸ್ ಜನಾಂಗದ ರಾಜ್ಯಾಧ್ಯಕ್ಷ ರಾಜೇಂದ್ರಕುಮಾರ್ ತಿಳಿಸಿದರು.
ತುಮಕೂರು ಜಿಲ್ಲಾ ಹಂದಿಜೋಗೀಸ್ ಜನಾಂಗದ ಕೋರ್ಕಮಿಟಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತುಮಕೂರು ಜಿಲ್ಲಾಧ್ಯಕ್ಷ ಮುಕುಂದ ಮಾತನಾಡಿ, ನಮ್ಮ ಜನಾಂಗದ ಜಾತಿ ಪ್ರಮಾಣ ಪತ್ರಗಳನ್ನು ಇತರೆ ಸಮುದಾಯದವರು ಪಡೆದುಕೊಂಡು ನಮ್ಮ ಸಮುದಾಯದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ತುಮಕೂರು ಜಿಲ್ಲಾಧಿಕಾರಿಗಳಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮತ್ತು ಪೊಲೀಸ್ ಇಲಾಖೆಗೆ ದೊರು ನೀಡಿರುತ್ತದೆ. ನಮ್ಮ ಸಮುದಾಯದವರಿಗೆ ನೀಡಿರುವ ವಸತಿ ಸೌಲಭ್ಯಗಳನ್ನು ಇತರೆ ಸಮುದಾಯದವರು ಪಡೆಯುತ್ತಿರುವುದನ್ನು ಸಹ ಅಧಿಕಾರಿಗಳ ಗಮನಕ್ಕೆ ತಂದಿರುತ್ತದೆ ಎಂದರು.
ಜಿಲ್ಲಾ ಸಂಘದ ಗೌರವ ಅಧ್ಯಕ್ಷ ಡಾ.ರಂಗಸ್ವಾಮಿ ಮಾತನಾಡಿ, ತಾಲೂಕು ಮಟ್ಟದಲ್ಲಿ ಸಂಘವನ್ನು ಬಲಪಡಿಸಿ ಸಮುದಾಯವನ್ನು ಬಲಪಡಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್, ಖಜಾಂಚಿ ಶ್ರೀಕಂಠ ಮತ್ತು ಜಿಲ್ಲಾ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಯಲ್ಲಪ್ಪ, ಮಂಜುನಾಥ್ ಮತ್ತು ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರಾದ ಹರೀಶ್, ಜಗದೀಶ್, ಸೋಮಶೇಖರ್, ಮೊಹನ್ಕುಮಾರ್ ಹಾಜರಿದ್ದರು.


