ಸಹಕಾರಿ ಆಂದೋಲನ ಜನರ ಆಂದೋಲನವಾಗಬೇಕೆಬ ಮಹಾತ್ವಕಾಂಕ್ಷೆಯಿಂದ ಸಹಕಾರಿ ತಿದ್ದುಪಡಿ ಕಾಯ್ದೆಯಲ್ಲಿ ತರಲಾಗಿದ್ದು, ಇಡೀ ಭಾರತದಲ್ಲಿಯೇ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಸ್ವತಃ ರಾಜ್ಯಪಾಲರೇ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಎಸ್.ಸ್ಸಿ, ಎಸ್ಟಿ ಜನಾಂಗಗಳಿಗೆ ಮೀಸಲಾತಿ ಇರುವಂತಹ ಸಹಕಾರ ಕ್ಷೇತ್ರದ ವ್ಯಾಪ್ತಿಗೆ ಬರುವ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್, ಮಿಲ್ಕ್ ಯೂನಿಯನ್, ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಮೀಸಲಾತಿ ಇರಬೇಕೆಂಬ ನಿಯಮವನ್ನು ತಿದ್ದುಪಡಿಯಲ್ಲಿ ಅಳವಡಿಸಲಾಗಿದೆ. ಸಹಕಾರಿ ತಿದ್ದುಪಡಿ ಕಾಯ್ದೆ ಸಂಪೂರ್ಣವಾಗಿ ಜಾರಿಗೆ ಬಂದರೆ ಹೆಚ್ಚು ಜನರಿಗೆ ಉಪಯೋಗವಾಗಲಿದೆ ಎಂದರು. ಸರಕಾರಿ ಸಂಸ್ಥೆಗಳಲ್ಲಿ ಆಗುವ ಹಣಕಾಸಿನ ಅವ್ಯವಹಾರವನ್ನು ತಡೆಯುವ ನಿಟ್ಟಿನಲ್ಲಿ ನಿರ್ದೇಶಕನಾಗ ಬಯಸುವ ವ್ಯಕ್ತಿ, ತಾನು ಸ್ಪರ್ಧಿಸುವ ಚುನಾವಣೆ ವೇಳೆ ಆಸ್ತಿ, ಪಾಸ್ತಿ ಘೋಷಣೆ ಮಾಡಿಕೊಳ್ಳಬೇಕೆಂಬ ನಿಯಮ ತರಲಾಗಿದೆ. ಒಂದು ವೇಳೆ ಸುಸ್ತಿದಾರರಾದಂತಹ ಸಂದರ್ಭದಲ್ಲಿ ಅವರ ಘೋಷಿತ ಆಸ್ತಿಗಳ ಮೇಲೆ ದಾವೆ ಹೂಡಲು ಅನುಕೂಲವಾಗುತ್ತದೆ. ಇದರಿಂದ ಬ್ಯಾಂಕುಗಳು ಎನ್.ಪಿ.ಎಯಿಂದ ನಷ್ಟ ಹೊಂದುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಸಹಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಗೆ ತಲಾ ಒಂದು ಸೀಟು, ಅದರಲ್ಲಿ ಮಹಿಳೆಗೆ ಒಂದು ಸ್ಥಾನವನ್ನು ಕಡ್ಡಾಯಗೊಳಿಸಲಾಗಿದೆ. ಯಾವ ವರ್ಗಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅಂತಹ ಜಾತಿಯನ್ನು ಗುರುತಿಸಿ ಅವರನ್ನು ನಾಮನಿರ್ದೇಶನಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಮೊದಲಿಗೆ ರಾಜ್ಯಪಾಲರು ಸಹಕಾರಿ ತಿದ್ದುಪಡಿ ಕಾಯ್ದೆಗೆ ಸಹಿ ಹಾಕದೆ ವಾಪಸ್ ಕಳುಹಿಸಿದ್ದರು. ಆದರೆ ನಾನು ಅವರನ್ನು ಭೇಟಿಯಾಗಿ, ಕಾಯ್ದೆಯ ಮಹತ್ವ ವಿವರಿಸಿ, ಮನವರಿಕೆ ಮಾಡಿಕೊಟ್ಟ ನಂತರ, ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ಸ್ವತಃ ರಾಜ್ಯಪಾಲರೇ ಪ್ರಶಂಶಿಸಿದರು. ಇಂದು ಇಡೀ ದೇಶದಿಂದ ಈ ಕಾಯ್ದೆಯ ರೂಪುರೇಷೆ ತಿಳಿಯಲು ಬೇಡಿಕೆ ಬಂದಿದೆ ಎಂದು ಹೇಳಿದರು.
ರಾಜ್ಯ ಸರಕಾರಗಳಿಗೆ ಜಾತಿ ಗಣತಿ ನಡೆಸಲು ಅಧಿಕಾರವಿಲ್ಲ.ಇದನ್ನು ಸ್ವತಹಃ ರಾಜ್ಯ ಸರಕಾರಗಳೇ ಅಪಿಡವೆಟ್ ಮೂಲಕ ಸಲ್ಲಿಸಿವೆ.ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ಸಮೀಕ್ಷೆ ಫಾರಂ ನಲ್ಲಿರುವ 60 ಪ್ರಶ್ನೆಗಳಲ್ಲಿ ಜಾತಿಯೂ ಒಂದು. ಇಷ್ಟವಿದ್ದವರು ಹೇಳಬಹುದು, ಇಲ್ಲವೇ ಬಿಡಬಹುದು, ಬಲವಂತ ಮಾಡುವಂತಿಲ್ಲ ಎಂದು ಕೆ.ಎನ್.ರಾಜಣ್ಣ, ಆರ್.ಎಸ್.ಎಸ್ ಸೇರಿದಂತೆ ಯಾವುದೇ ಸಂಘಟನೆ ಸರಕಾರಿ ಜಾಗ ಬಳಕೆ ಮಾಡುವಾಗ ಅನುಮತಿ ಪಡೆಯುವುದು ಕಡ್ಡಾಯ. ಈದ್ಗಾ ನಮಾಜ ಮಾಡುವ ವೇಳೆ ಜನರು ಹೆಚ್ಚಾದರೆ ಅನಿವಾರ್ಯವಾಗಿ ರಸ್ತೆಗಳಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಾರೆ. ಆಗ ನೀವು ಅನುಮತಿ ಪಡೆದಿಲ್ಲ ಎಂದು ಪ್ರಾರ್ಥನೆ ತಡೆಯಲು ಸಾಧ್ಯವೇ?, ಇಂತಹ ಕಾಯ್ದೆಗಳು ಪುಸ್ತಕದಲ್ಲಿ ಇರಲು ಮಾತ್ರ ಸಾಧ್ಯ ಎಂದು ಪ್ರತಿಕ್ರಿಯಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾರಾಯಣಗೌಡ, ಪ್ರಭಾಕರ್, ಬ್ಯಾಂಕಿನ ಎಂ.ಡಿ.ಜAಗವiಪ್ಪ ಇದ್ದರು.


