Monday, March 16, 2026
Google search engine
Homeಮುಖಪುಟಫೆ.2ರಂದು 'ಅವು ಅಂಗೇ' ಕೃತಿಯ ಲೋಕಾರ್ಪಣೆ

ಫೆ.2ರಂದು ‘ಅವು ಅಂಗೇ’ ಕೃತಿಯ ಲೋಕಾರ್ಪಣೆ

ಜಲಜಂಬೂ ಲಿಂಕ್ಸ್, ಅರುಣೋದಯ ಸಹಕಾರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಹಾಗೂ ಅಲೇಖ್ಯ ಎಂಟರ್ ಪ್ರೈಸಸ್ ವತಿಯಿಂದ ಫೆ.2ರಂದು ಬೆಳಗ್ಗೆ 10.30ಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಡಾ.ರವಿಕುಮಾರ್ ನೀಹ ಬರೆದಿರುವ ‘ಅವು ಅಂಗೇ’ ಕೃತಿಯ ಲೋಕಾರ್ಪಣೆ ಮತ್ತು ಚರ್ಚೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಹಿರಿಯ ಕತೆಗಾರ್ತಿ ಬಿ.ಟಿ.ಜಾಹ್ನವಿ ಕೃತಿಯನ್ನು ಲೋಕಾರ್ಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಭಾಗವಹಿಸುವರು. ಸಾಹಿತಿ ತುಂಬಾಡಿ ರಾಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಚಿಂತಕಿ ಡಾ.ಭಾರತಿದೇವಿ, ಲೇಖಕ ಡಾ.ಹರೀಶ್ ಗಂಗಾಧರ್, ನವೀನ್ ಪೂಜಾರಳ್ಳಿ ಪಾಲ್ಗೊಳ್ಳುವರು, ಗುರುಪ್ರಸಾದ್ ಕಂಟಲಗೆರೆ, ಕಾಂತರಾಜು ಗುಪ್ಪಟ್ಣ, ಮೋದೂರು ತೇಜ, ಡಾ.ಮೂರ್ತಿ ತಿಮ್ಮನಹಳ್ಳಿ, ಎಂ. ಆಶಾರಾಣಿ, ಎಸ್.ಪಾರ್ವತಿ ಭಾಗವಹಿಸುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular