Monday, March 16, 2026
Google search engine
Homeಮುಖಪುಟಮಧುಗಿರಿ: ಕೈಮದ್ದು ಸ್ಪೋಟ-ಇಬ್ಬರಿಗೆ ಗಂಭೀರ ಗಾಯ

ಮಧುಗಿರಿ: ಕೈಮದ್ದು ಸ್ಪೋಟ-ಇಬ್ಬರಿಗೆ ಗಂಭೀರ ಗಾಯ

ಬಂಡೆ ಹೊಡೆಯಲು ಇಡಲಾಗಿದ್ದು ಮದ್ದು ಸಿಡಿದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ.
ಮಧುಗಿರಿ ತಾಲೂಕಿನ ಕಸಬಾ ಹೋಬಳಿ ಡಿ.ವಿ ಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ಸೈಜು ಕಲ್ಲುಗಳನ್ನು ಮಾಡಲು ಬಂಡೆಗಳನ್ನು ಹೊಡೆಯಲು ಇಟ್ಟಿದ್ದ ಮದ್ದಿನ ಲೋಡ್ ನಿಷ್ಕ್ರಿಯಗೊಂಡಿದೆ ಎಂದು ತಿಳಿಯಲು ಹೋಗಿದ್ದ ವೀರಗೊಂಡನಹಳ್ಳಿಯ ಮಂಜುನಾಥ್, ಹೊಸಹಳ್ಳಿಯ ಕೋಟಪ್ಪ ಎನ್ನುವವರಿಗೆ ಆಕಸ್ಮಿಕವಾಗಿ ಮದ್ದು ಸ್ಪೋಟಗೊಂಡ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ತಕ್ಷಣ ಅಲ್ಲಿದ್ದ ಕೆಲಸಗಾರರು ಮಧುಗಿರಿ ಖಾಸಗಿ ಆಸ್ಪತ್ರೆಗೆ ಇಬ್ಬರನ್ನು ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಧುಗಿರಿಯ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular