Thursday, September 19, 2024
Google search engine
Homeಜಿಲ್ಲೆವಿದ್ಯುತ್ ತಂತಿ ತಗುಲಿ ಮಹಿಳೆ ದಾರುಣ ಸಾವು-ಮೃತ ಮಹಿಳೆಯ ಮಗುವನ್ನು ಎತ್ತಿಕೊಂಡು ಭಾವುಕರಾದ ಶಾಸಕ

ವಿದ್ಯುತ್ ತಂತಿ ತಗುಲಿ ಮಹಿಳೆ ದಾರುಣ ಸಾವು-ಮೃತ ಮಹಿಳೆಯ ಮಗುವನ್ನು ಎತ್ತಿಕೊಂಡು ಭಾವುಕರಾದ ಶಾಸಕ

ಮನೆಯ ಮೇಲೆ ಹಾದು ಹೋಗಿರುವ 11 ಕೆವಿ ವಿದ್ಯುತ್ ಲೈನ್ ತಂತಿ ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ.

ಪಾವಗಡ ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ಅವಘಡ ಜರುಗಿದ್ದು 30 ವರ್ಷದ ತ್ರಿವೇಣಿ ಮೃತಪಟ್ಟಿದ್ದಾರೆ.

ಕೆಲಸದ ನಿಮಿತ್ತ ತ್ರಿವೇಣಿ ತನ್ನ ತವರು ಮನೆ ಕೊತ್ತೂರು ಗ್ರಾಮಕ್ಕೆ ಬಂದಿದ್ದರು. ತಂದೆ ಹೊಸದಾಗಿ ಮನೆ ನಿರ್ಮಿಸುತ್ತಿದ್ದರು. ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದಾಗ ಕೆಳಗೆ ಇದ್ದ ಕಬ್ಬಿಣದ ರಾಡುಗಳನ್ನು ಮನೆಯ ಮೇಲೆಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಮನೆಯ ಮೇಲೆ ಹಾದುಹೋಗಿದ್ದ ವಿದ್ಯುತ್ ಲೈನ್ ತಗಲಿ ಮೃತಪಟ್ಟಿದ್ದಾರೆ.

ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ಲೈನ್ ಅನ್ನು ತೆರೆವುಗೊಳಿಸುವಂತೆ ವಿದ್ಯುತ್ ಇಲಾಖೆಯವರಿಗೆ ಬಹಳಷ್ಟು ಸಾರಿ ಮನವಿ ಮಾಡಿದ್ದರೂ ಸಹ ತೆರವುಗೊಳಿಸದೆ ಇದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಶಾಸಕ ಎಚ್.ವಿ. ವೆಂಕಟೇಶ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹದ ಅಂತಿಮ ದರ್ಶನ ಪಡೆದು ಮೃತರ ಕುಟುಂಬದವರಿಗೆ ಧರ್ಯ ತುಂಬಿದರು. ಜೊತೆಗೆ ತಾಯಿ ಕಳೆದುಕೊಂಡಿದ್ದ ಮಗುವನ್ನು ಎತ್ತಿಕೊಂಡು ಭಾವುಕರಾದರು. ಸರ್ಕಾರದಿಂದ ಹಣ ಕೊಡಿಸುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular