Monday, September 16, 2024
Google search engine
Homeಮುಖಪುಟಚಿಕ್ಕನಾಯಕನಹಳ್ಳಿ:ಲಂಚ ಸ್ವೀಕರಿಸುತ್ತಿದ್ದ ಮೂವರು ಇಂಜಿನಿಯರ್ ಗಳ ಬಂಧನ

ಚಿಕ್ಕನಾಯಕನಹಳ್ಳಿ:ಲಂಚ ಸ್ವೀಕರಿಸುತ್ತಿದ್ದ ಮೂವರು ಇಂಜಿನಿಯರ್ ಗಳ ಬಂಧನ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗ ಕಚೇರಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 1.50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಮೂರು ಮಂದಿ ಭ್ರಷ್ಟ ಇಂಜಿನಿಯರ್ ಗಳನ್ನು ಬಲೆಗೆ ಬೀಳಿಸಿದ್ದಾರೆ.
ಎಇಇ ಉಮಾ ಮಹೇಶ್, ಜೆಇ ಶಶಿಕುಮಾರ್, ಹಾಗು ಕಿರಣ್ ಲಂಚ ಪಡೆಯುತ್ತಿದ್ದರು. ಒಂದೇ ಪ್ರಕರಣದಲ್ಲಿ ಮೂರು ಮಂದಿ ಅಧಿಕಾರಿಗಳನ್ನು ಲೋಕಾಯುಕ್ತ ಪೋಲೀಸರು ಬಂಧಿಸಿದ್ದಾರೆ.

ಗುತ್ತಿಗೆದಾರ ಎನ್.ಸಿ.ಚಿಕ್ಕೇಗೌಡ ಜೆಜೆಎಂ ಕಾಮಾಗಾರಿಗಳನ್ನು ಪೂರ್ಣಗೊಳಿಸಿದ್ದರೂ ಬಿಲ್ ಮಾಡಿಕೊಡಲು ಅಧಿಕಾರಿಗಳು ಸತಾಯಿಸಿ 1.5 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ನಿರಾಕರಿಸಿದ್ದ ಚಿಕ್ಕೇಗೌಡ ಲೋಕಾಯುಕ್ತ ಪೋಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಉಮಾಶಂಕರ್, ರಾಮಕೃಷ್ಣಪ್ಪ ನೇತೃತ್ವದಲ್ಲಿ ತಂಡ ದಾಳಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular