ಟೋಕಿಯೋ-2020 ಓಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ತೋರುವುದಕ್ಕೆ ಅಗತ್ಯ ತರಬೇತಿ ನೀಡಿದ ತರಬೇತುದಾರ್ತಿ ಕು. ಅಂಕಿತಾ ಬಿಲ್ಲವ ಸುರೇಶ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿ ಗೌರವಿಸಿದ್ದಾರೆ.
ಅಂಕಿತ ಅವರು ಕನ್ನಡದ ಯುವತಿಯಾಗಿದ್ದು, ಭಾರತ ತಂಡದ ಕೋಚ್ ಆಗಿರುವುದು ಹೆಮ್ಮೆಯ ಸಂಗತಿ. ಅಂಕಿತ ಮಡಿಕೇರಿ ಮೂಲದವರಾಗಿದ್ದು ಅವರಿಗೆ ಮತ್ತು ತಂಡಕ್ಕೆ ಅಭಿನಂದನೆಗಳು ಸಲ್ಲಬೇಕಾಗಿದೆ ಎಂದು ಟ್ವೀಟ್ ನಲ್ಲಿ ಪೋಟೋ ಸಹಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.