Monday, March 16, 2026
Google search engine
Homeಮುಖಪುಟಸಂವಿಧಾನದ 127ನೇ ತಿದ್ದುಪಡಿ ಅಂಗೀಕಾರ - ರಾಜ್ಯಗಳಿಗೆ ಒಬಿಸಿ ಮೀಸಲಾತಿ ಅಧಿಕಾರ ಪುನಃಸ್ಥಾಪನೆ

ಸಂವಿಧಾನದ 127ನೇ ತಿದ್ದುಪಡಿ ಅಂಗೀಕಾರ – ರಾಜ್ಯಗಳಿಗೆ ಒಬಿಸಿ ಮೀಸಲಾತಿ ಅಧಿಕಾರ ಪುನಃಸ್ಥಾಪನೆ

ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ, ತಮ್ಮದೇ ಆದ ಒಬಿಸಿ ಪಟ್ಟಿಯನ್ನು ಹೊರಡಿಸಲು ಸಂವಿಧಾನದ 127ನೇ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಆಗಸ್ಟ್ 11ರಂದು ಅಂಗೀಕರಿಸಲಾಯಿತು. ಇದರಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ರಾಜ್ಯಗಳ ಅಧಿಕಾರ ಪುನರ್ ಸ್ಥಾಪನೆಯಾದಂತಾಗಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ರಾಜ್ಯಗಳ ಅಧಿಕಾರವನ್ನು ತನ್ನ ಒಬಿಸಿ ಪಟ್ಟಿಯನ್ನು ಪುನರ್ ಸ್ಥಾಪಿಸುವ ಸಾಮಾನ್ಯ ವ್ಯವಹಾರ ತಿದ್ದುಪಡಿ ಮಸೂದೆ 2021ನ್ನು ರಾಜ್ಯಸಭೆಯಲ್ಲಿ ಮಂಡಿಸಿ ಇದರಿಂದ ರಾಜ್ಯಗಳಿಗೆ ಸಹಾಯ ಮಾಡಿದಂತೆ ಆಗುತ್ತದೆ ಎಂದರು.

ಇತ್ತೀಚೆಗೆ ಒಬಿಸಿ ವರ್ಗಕ್ಕೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ರಾಜ್ಯಗಳ ಅಧಿಕಾರವನ್ನು ರದ್ದುಪಡಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈಗ ರಾಜ್ಯಗಳ ಅಧಿಕಾರವನ್ನು ಪುನರ್ ಸ್ಥಾಪಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಿರುವುದು ಒಬಿಸಿ ವರ್ಗಕ್ಕೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಸದನದಲ್ಲಿ ಈ ಮಸೂದೆಯನ್ನು ಮಂಡಿಸಿದಾಗ ಎಲ್ಲಾ ಪಕ್ಷಗಳ ಸದಸ್ಯರು ಬೆಂಬಲ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಒಬಿಸಿ ವರ್ಗಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಮಸೂದೆಯನ್ನು ಅಂಗೀಕರಿಸಲು ಸಹಕರಿಸಿದ್ದಾರೆ. ಅವರಿಗೆ ಹಿಂದುಳಿದ ವರ್ಗದ ಬಗ್ಗೆ ಪ್ರೀತಿ ಇದೆ. ಅದಕ್ಕಾಗಿ ಪ್ರಧಾನಿಗಳನ್ನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ಈ ಕೈಗೊಂಡಿರುವ ನಿರ್ಣಯ ಇತಿಹಾಸವಾಗಲಿದೆ ಎಂದು ಹೇಳಿದರು.

ದೇಶದಲ್ಲಿ 671 ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಬರುತ್ತವೆ. ದೇಶದ ಜನರ 5/1 ಭಾಗದಷ್ಟು ಜನರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಒಬಿಸಿ ವರ್ಗಕ್ಕೆ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ರಾಜ್ಯಗಳು ಮೀಸಲಾತಿ ನೀಡಲು ಅವಕಾಶವಿದೆ. ಇದರಿಂದ ಹಿಂದುಳಿದ ವರ್ಗಗಳಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.

“ಈ ತಿದ್ದುಪಡಿಯು ಮೀಸಲಾತಿಯನ್ನು ಒದಗಿಸಲು ರಾಜ್ಯಗಳ ಒಬಿಸಿ ಪಟ್ಟಿಯನ್ನು ಹೊಂದಲು ಅಧಿಕಾರವನ್ನು ಪುನಃಸ್ಥಾಪಿಸಲು ಅಗತ್ಯವಾಗಿದೆ. ಈ ಮೀಸಲಾತಿಯನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದೆ. ಆದರೆ ಮೀಸಲಾತಿ ಮಾನದಂಡಗಳನ್ನು ಮತ್ತು ಅದನ್ನು ಸ್ಪಷ್ಟಪಡಿಸುವ ಸಲುವಾಗಿ ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಈಗ ತರಲಾಗಿದೆ” ಎಂದು ಸ್ಪಷ್ಟಡಿಸಿದರು.

“ಇದು ಇತರೆ ಹಿಂದುಳಿದ ವರ್ಗಳಗಳ ಕಲ್ಯಾಣಕ್ಕೆ ಸಹಾಯ ಮಾಡಲು ಒಕ್ಕೂಟ ವ್ಯವಸ್ಥೆ ರಚನೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ರಾಜ್ಯಗಳಲ್ಲಿ ಒಬಿಸಿಗಳಿಗೆ ಮೀಸಲಾತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರ್ಕಾರ ಹಿಂದಿನ ಸಂವಿಧಾನ ತಿದ್ದುಪಡಿ ಸಮಯದಲ್ಲಿ ಸ್ಪಷ್ಟಪಡಿಸಿದೆ’ ಎಂದು ಸಚಿವರು ಹೇಳಿದರೆಂದೆ ಎನ್.ಡಿ. ಟಿವಿ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular