Saturday, July 27, 2024
Google search engine
Homeಮುಖಪುಟಫೆ.22ರಂದು ಚಿತ್ರದುರ್ಗದಲ್ಲಿ ಕಾಗೆ ಕಾರುಣ್ಯದ ಕಣ್ಣು ಕೃತಿ ಬಿಡುಗಡೆ

ಫೆ.22ರಂದು ಚಿತ್ರದುರ್ಗದಲ್ಲಿ ಕಾಗೆ ಕಾರುಣ್ಯದ ಕಣ್ಣು ಕೃತಿ ಬಿಡುಗಡೆ

ಗೆಳೆಯರ ಬಳಗ ಚಿತ್ರದುರ್ಗ ವತಿಯಿಂದ ಫೆಬ್ರವರಿ 22ರಂದು ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ನಾಡೋಜ ಬರಗೂರು ರಾಮಚಂದ್ರ ಅವರ ಮೂರನೇ ಮುದ್ರಣ ಕಂಡಿರುವ ಆಯ್ದ ಅನುಭವಗಳ ಕಥನ ‘ಕಾಗೆ ಕಾರುಣ್ಯದ ಕಣ್ಣು’ ಕೃತಿಯ ಜನಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಾಹಿತಿ ಡಾ.ರಾಜಪ್ಪ ದಳವಾಯಿ ಕೃತಿಯ ಜನಾರ್ಪಣೆ ಮಾಡುವರು. ಕೃತಿಯ ಕುರಿತು ಲೇಖಕಿ ಡಾ.ತಾರಿಣಿ ಶುಭದಾಯಿನಿ ಮಾತನಾಡುವರು.

ಅತಿಥಿಗಳಾಗಿ ಬಿ.ಎ.ಲಿಂಗಾರೆಡ್ಡಿ, ಕೆ.ಎಂ.ವೀರೇಶ್, ಮೆಹಬೂಬ್ ಪಾಷ, ಜಿ.ಎಸ್.ಮಂಜುನಾಥ್, ಪ್ರೊ.ಸಂದೀಪ್, ಸಿ.ರಘು, ಒ.ಪರಮೇಶ್ವರಪ್ಪ ಭಾಗವಹಿಸುವರು.

ಕೃತಿಯ ಲೇಖಕ ಪ್ರೊ.ಬರಗೂರು ರಾಮಚಂದ್ರಪ್ಪ ಮತ್ತು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸುಂದರರಾಜ ಅರಸು ವಿಶೇಷ ಉಪಸ್ಥಿತಿ ಇರುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular