ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ ಕೇಂದ್ರದಲ್ಲಿ ವೈಜ್ಞಾನಿಕ ತಳಿ ಸಂಶೋಧನೆಗಳನ್ನು ಆರಂಭಿಸಿದ ಎಂ ಎಸ್ ಸ್ವಾಮಿನಾಥನ್ ಭಾರತದ ಆಹಾರ ಕ್ರಾಂತಿಯಲ್ಲಿ ಭಾರಿ ಪ್ರಮುಖ ಪಾತ್ರವಹಿಸಿದರು ಎಂದು ರೈತ ಮುಖಂಡ ಮನೋಹರ್ ಪಟೇಲ್ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ತಿಪಟೂರಿನ ರೈತ ಭವನದಲ್ಲಿ ರಾಜ್ಯ ರೈತ ಸಂಘ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಭಾರತದ ಅಹಾರ ಕ್ರಾಂತಿಯ ಪಿತಾಮಹ ಎಂಎಸ್ ಸ್ವಾಮಿನಾಥನ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭತ್ತ ಮತ್ತು ಗೋಧಿಯ ಅಧಿಕ ಇಳುವರಿಯ ತಳಿಯನ್ನು ಅಭಿವೃದ್ಧಿಪಡಿಸಿ ಆಹಾರದ ಅಭಾವವನ್ನು ನೀಗಿಸುವಲ್ಲಿ ಅಂದಿನ ಕಾಲಘಟ್ಟಕ್ಕೆ ಯಶಸ್ವಿಯಾಗಿದ್ದರು ಎಂದು ಶ್ಲಾಘಿಸಿದ್ದಾರೆ.
ಡಾ. ಎಂ ಎಸ್ ಸ್ವಾಮಿನಾಥನ್ ಅವರ ಕಾರ್ಯಗಳಿಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅಮೆರಿಕ ಕೂಡ ಅವರಿಗೆ ಗೌರವಿಸಿತ್ತು. ರೈತರು ಬೆಳೆವ ಬೆಲೆಯ ಖರ್ಚಿನ ಒಂದುವರೆ ಪಟ್ಟು ಲಾಭ ಅವರ ಇಳುವರಿಗೆ ಬರಬೇಕು ಎಂಬ ವರದಿಯನ್ನು ಕೊಟ್ಟಿದ್ದ ಅವರು ಅದರಿಂದ ರೈತರು ಇಂದು ಎಂ ಎಸ್ ಪಿ ಕೇಳಲು ಸಾಧ್ಯವಾಯಿತು ಎಂದರು.
ರೈತ ಮುಖಂಡ ಅಕಾಶ ಮಾತನಾಡಿ ಹಸಿರು ಕ್ರಾಂತಿಯ ಹರಿಕಾರ ಎಂದು ಸ್ವಾಮಿನಾಥನ್ ರೈತರ ಉತ್ಪಾದನೆಯ ಮೇಲೆ ಬೆಲೆ ನಿಗದಿಯಾಗಬೇಕೆಂಬ ಅವರ ವರದಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಹೆಚ್ಚು ಹೋರಾಟ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು,
ಈ ಸಭೆಯಲ್ಲಿ ಹಸಿರು ಸೇನೆಯ ದೇವರಾಜ್ ತಿಮ್ಲಾಪುರ ಕರ್ನಾಟಕ ರಾಜ್ಯ ರೈತ ಸಂಘದ ಜಯಚಂದ್ರ ಶರ್ಮ ಕಾರ್ಯದರ್ಶಿ ಹರೀಶ್ ಪ್ರಾಂತ ರೈತ ಸಂಘದ ಚನ್ನಬಸವಣ್ಣ ರಾಜಮ್ಮ ಚಂದನ್ ಆರ್ ವೈ ಟಿ ಯ ತಾಸೀನಗ ಶರೀಪ್ ಉಪಸ್ಥಿತರಿದ್ದರು


