Friday, September 20, 2024
Google search engine
Homeಜಿಲ್ಲೆಈಗ್ಲಾದ್ರೂ ಕೊಟ್ರಲ್ಲಪ್ಪ, ಜೀವ ತಣ್ಣಗಾಯಿತು- ನೀರು ಕುಡಿದ ಮಹಿಳೆಯರ ಉದ್ಗಾರ

ಈಗ್ಲಾದ್ರೂ ಕೊಟ್ರಲ್ಲಪ್ಪ, ಜೀವ ತಣ್ಣಗಾಯಿತು- ನೀರು ಕುಡಿದ ಮಹಿಳೆಯರ ಉದ್ಗಾರ

ಈಗ್ಲಾದ್ರೂ ಕೊಟ್ರಲ್ಲಪ್ಪ, ಜೀವ ತಣ್ಗಾಯ್ತು, ಅಬ್ಬಾ ಏನ್ ಬಿಸಿಲು, ಧಗೆ ಎಂದು ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ನಡೆಸಿದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ತೆಗೆದ ಉದ್ಗಾರವಿದು.

ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ವಿಶಾಲಾಕ್ಷಮ್ಮ ಕಲ್ಯಾಣ ಮಂಟಪದಿಂದ ಸೋಮೇಶ್ವರ ಮುಖ್ಯರಸ್ತೆಯ ನಮ್ಮೂರ ಆಹಾರ ಬೇಕರಿಯವರೆಗೆ ಜ್ಯೋತಿ ಗಣೇಶ್ ಮೆರವಣಿಗೆ ನಡೆಸಿ ಮತ ಯಾಚಿಸಿದರು.

ಮೆರವಣಿಗೆ ನಮ್ಮೂರ ಆಹಾರದ ಬಳಿ ಬರುತ್ತಿದ್ದಂತೆ ಆಟೋ ವಾಹದಲ್ಲಿ ತಂದಿದ್ದ ಕುಡಿಯುವ ನೀರಿನ ಬಾಟಲಿಗಳನ್ನು ಪ್ರಚಾರದಲ್ಲಿ ತೊಡಗಿದ್ದವರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳೆಯರ ಗುಂಪೊಂದು ವಾಟರ್ ಬಾಟೆಲ್ ಗಳನ್ನು ಹಿಡಿದುಕೊಂಡು ನೀರು ಕುಡಿಯುತ್ತಾ ‘ಅಬ್ಬಾ ಈಗ್ಲಾದ್ರೂ ಕೊಟ್ರಲ್ಲಪ್ಪ ಎಂದು ಉದ್ಗಾರ ತೆಗೆದರು. ಬಿಸಿಲು ನೆತ್ತಿ ಸುಡುತ್ತೆ ನೀರು ಕುಡಿಯೋಣ ಅಂದ್ರೆ ತಂದಿಲ್ಲ. ಈಗ್ಲಾದರೂ ಕೊಟ್ರಲ್ಲ, ಜೀವ ತಣ್ಗಾಯ್ತು ಬಿಡಮ್ಮ ಎಂದರು.

ಮನೆಗೆ ಹೋಗುವ ಹೊತ್ತಿನಲ್ಲಾದರೂ ಕುಡಿಯುವ ನೀರು ಕೊಟ್ರು ಎಂದು ಮಹಿಳೆಯರ ಗುಂಪು ಪರಸ್ಪರ ಮಾತನಾಡಿಕೊಳ್ಳುವಾಗ ಮೇ 1ರಂದು ಸಂಜೆ 5.50 ಗಂಟೆಯಾಗಿತ್ತು. ನೀರು ಕುಡಿದ ಬಾಟಲಿಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಆ ಮಹಿಳೆಯರು ನಮ್ಮೂರ ಆಹಾರ್ ನಿಂದ ತಮ್ಮ ಮನೆಗಳಿಗೆ ತೆರಳಿದರು.

ಶಾಸಕ ಜ್ಯೋತಿ ಗಣೇಶ್ ನಡೆಸಿದ ಮೆರವಣಿಗೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಹುಲಿನಾಯ್ಕರ್ ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular