ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಯಾರನ್ನೂ ಸೋಲಿಸಲು ಸ್ಪರ್ಧಿಸಿಲ್ಲ. ಗೆಲುವು ಸಾಧಿಸಲು ಬಂದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ನರಸೇಗೌಡ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಸಮಾಜ ಸೇವೆಯಿಂದ ರಾಜಕಾರಣಕ್ಕೆ ಬಂದಿದ್ದು ಎರಡು ದಶಕಗಳಿಂದಲೂ ಜೆಡಿಎಸ್ ಪಕ್ಷಕ್ಕೆ ದುಡಿದ್ದೇನೆ. ಹೀಗಿದ್ದರೂ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡಲಿಲ್ಲ ಎಂದು ದೂರಿದ್ದಾರೆ.
ನನ್ನನ್ನು ಯಾಕೆ ಗೆಲ್ಲಿಸಬೇಕು ಎಂದರೆ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ್ದೇನೆ. ಸಣ್ಣ ಗುತ್ತಿಗೆದಾರನಾಗಿ ಕೆಲಸ ಮಾಡಿರುವುದರಿಂದ ಎಲ್ಲಾ ಇಲಾಖೆ ಪರಿಚಯವಿದೆ. ಹೇಮಾವತಿ ನೀರು ಇಲ್ಲದಿದ್ದರೂ ನೀರು ಒದಗಿಸುವ ಯೋಜನೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರುವ ವಿದ್ಯಾರ್ಥಿ ಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಬಂದಿದ್ದೇನೆ ಎಂದರು.
ನಾನು ಚುನಾವಣಾ ಕಣದಿಂದಿ ಹಿಂದೆ ಸರಿಯುತ್ತಾರೆ ಎಂದುಕೊಂಡಿದ್ದರು. ಆದರೆ ನಾನು ಕಣದಿಂದ ಹಿಂದೆ ಸರಿದಿಲ್ಲ. ಚುನಾವಣೆಯಲ್ಲಿ ನಾನು ಹೆಂಡ, ಹಣ ಹಂಚುವುದಿಲ್ಲ ಎಂದು ಹೇಳಿದ್ದಾರೆ.
ನಾನು ಚುನಾವಣೆ ಕಣದಲ್ಲಿ ಉಳಿದ ಮೇಲೂ ನನಗೆ ಯಾರೂ ಉಮೇದುವಾರಿಕೆ ವಾಪಸ್ ಪಡೆಯಿರಿ ಎಂದು ಕೇಳಿಲ್ಲ. ರ್ಯಾಲಿಗೆ ಬರಬೇಕು ಎಂದಷ್ಟೇ ಹೇಳಿದರು. ನಾನು ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಸುದ್ದಿ ಹರಡಿದರು. ಅವರಿಂದ ಇಂತಹದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.


