ಮುಂಬರುವ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದ್ದು ಪಟ್ಟಿಯನ್ನು ಹೈಕಮಾಂಡ್ ಒಪ್ಪಿಗೆಗಾಗಿ ದೆಹಲಿಗೆ ರವಾನಿಸಲಾಗಿದೆ. ಇನ್ನೊಂದು ಎರಡು ದಿನದಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.
ತುಮಕೂರು ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಂಡಿದ್ದು ಕೆಲವೊಂದು ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿ ಆಕಾಂಕ್ಷಿಗಳು ಇರುವುದು ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಪಾವಗಡ – ಚಂದ್ರಪ್ಪ, ವೆಂಕಟರವಣಪ್ಪ
ಮಧುಗಿರಿ – ಕೆ.ಎನ್.ರಾಜಣ್ಣ,
ಕೊರಟಗೆರೆ – ಡಾ.ಜಿ.ಪರಮೇಶ್ವರ್,
ತಿಪಟೂರು – ಕೆ.ಷಡಕ್ಷರಿ,
ಗುಬ್ಬಿ – ಎಸ್.ಆರ್. ಶ್ರೀನಿವಾಸ್,
ತುರುವೇಕೆರೆ – ಬೆಮೆಲ್ ಕಾಂತರಾಜು,
ಕುಣಿಗಲ್ – ಡಾ.ರಂಗನಾಥ್,
ಶಿರಾ – ಟಿ.ಬಿ.ಜಯಚಂದ್ರ ಅವರು ಸಂಭವನೀಯ ಅಭ್ಯರ್ಥಿಗಳಾಗಿದ್ದಾರೆ.
ತುಮಕೂರು – ಅತೀಕ್ ಅಹಮದ್ ಮತ್ತು ಡಾ.ರಫೀಕ್ ಅಹಮದ್,
ಚಿಕ್ಕನಾಯಕನಹಳ್ಳಿ – ಕಿರಣ್ ಕುಮಾರ್ ಅವರಿಗೆ ಟಿಕೆಟ್ ನೀಡುವುದು ಗ್ಯಾರೆಂಟಿಯಾಗಿದೆ.
ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿದ್ದು ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.


