ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ, ಲೇಖಕಿ ಬಯಲ ಓದು ಬಳಗದ ವತಿಯಿಂದ ಪುಸ್ತಕ ಓದು, ಚರ್ಚೆ, ಸಂವಾದಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಲೇಖಕಿ ಶೈಲಜಾ ನಾಗರಘಟ್ಟ ವಿರಚಿತ ಕಿಚ್ಚಿಲ್ಲದ ಬೇಗೆ ಕೃತಿಯ ಕುರಿತು ಚರ್ಚೆ ಕಾರ್ಯಕ್ರಮವನ್ನು ತುಮಕೂರು ನಗರದ ಸಂಗೀತ ಕಾರಂಜಿಯಲ್ಲಿ ಫೆಬ್ರವರಿ 11 ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕೃತಿಯ ಕುರಿತು ಲೇಖಕಿ ಗೀತಾಲಕ್ಷ್ಮಿ ಮಾತನಾಡಲಿದ್ದಾರೆ. ಸಂವಾದದಲ್ಲಿ ಡಾ.ಪವನ್ ಗಂಗಾಧರ್, ಅಕ್ಷತಾ, ಶೈಲಜಾ ಭಾಗವಹಿಸುವರು. ಅತಿಥಿಗಳಾಗಿ ಕಲೇಸಂ ತುಮಕೂರು ಜಿಲ್ಲಾ ಶಾಖೆಯ ಉಪಾಧ್ಯಕ್ಷೆ ಸಿ.ಎ. ಇಂದಿರ ಇರಲಿದ್ದಾರೆ.
ಕೃತಿಯ ಲೇಖಕಿ ಜೈಲಜಾ ನಾಗರಘಟ್ಟ ಉಪಸ್ಥಿತಿ ಇರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಪಾಲ್ಗೊಳ್ಳಲಿದ್ದಾರೆ.