Monday, March 16, 2026
Google search engine
Homeಮುಖಪುಟಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು - ಪ್ರಿಯಾಂಕ್ ಖರ್ಗೆ

ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು – ಪ್ರಿಯಾಂಕ್ ಖರ್ಗೆ

ಕಳೆದ ಎರಡು ದಿನಗಳಿಂದ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಬಹಳ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಕುಖ್ಯಾತಿ ಬಂದಿದೆ. ಈಗ ಅದನ್ನೂ ಮೀರಿಸುವಂತೆ 40% ಸರ್ಕಾರ ಎಂಬ ಬಿರುದು ಬಂದಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಕೆಲವು ಆಡಿಯೋಗಳು ವೈರಲ್ ಆಗುತ್ತಿದ್ದು, ಅದನ್ನು ಆಡಳಿತ ಪಕ್ಷದವರು ನಿರಾಕರಿಸುತ್ತಿಲ್ಲ. ಬಿಜೆಪಿ ಎಂದರೆ ಬ್ಕೋಕರ್ಸ್ ಜನತಾ ಪಕ್ಷ. ಇವರು ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ವಿಧಾನಸೌಧ ತನ್ನ ಪಾವಿತ್ರ್ಯತೆ, ವೈಭವ ಕಳೆದುಕೊಂಡು, ವಿಶ್ವದ ಅತ್ಯಂತ ದೊಡ್ಡ ಶಾಪಿಂಗ್ ಮಾಲ್ ಆಗಿದೆ ಎಂದು ಆಪಾದಿಸಿದರು.

ಕೆಲ ತಿಂಗಳ ಹಿಂದೆ ಸುದ್ದಿ ವಾಹಿನಿಗಳಲ್ಲಿ, ಬಿಜೆಪಿ ಶಾಸಕರೊಬ್ಬರು ವಿಧಾನಸೌಧ ಎದುರು ಶಾಸಕರ ಭವನದಲ್ಲಿ ಪಿಎಸ್ಐ ಹುದ್ದೆ ಮಾರಾಟಕ್ಕೆ ಸಂಧಾನ ಮಾಡಿದ್ದಾಗಿ ಒಪ್ಪಿಕೊಂಡಿದ್ದು ವರದಿಯಾಗಿದೆ. ಇದೇ ರೀತಿ ಜ.4ರಂದು ಪಿಡಬ್ಲ್ಯೂ ಇಲಾಖೆ ಒಬ್ಬ ಕಿರಿಯ ಇಂಜಿನಿಯರ್ 10.5 ಲಕ್ಷ ಹಣದ ಜತೆ ಸಿಕ್ಕಿಬಿದ್ದಿದ್ದಾರೆ. ಜೆಇಇ ಬಳಿ ಇಷ್ಟು ದೊಡ್ಡ ಮೊತ್ತ ಹೇಗೆ ಬಂತು, ಅದನ್ನು ಇಷ್ಟು ಧೈರ್ಯವಾಗಿ ವಿಧಾನಸೌಧದ ಒಳಗೆ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಅದನ್ನು ಯಾವ ಅಧಿಕಾರಿ, ಮಂತ್ರಿಗಳಿಗೆ ಕೊಡಲು ಹೋಗಿದ್ದರು. ಇದು ತನಿಖೆ ಆಗಬೇಕಲ್ಲವೇ? ಎಂದು ಕೇಳಿದ್ದಾರೆ.

ಸಾರ್ವಜನಿಕವಾಗಿ ಮುಖ್ಯಮಂತ್ರಿಗಳು ಹೈಕಮಾಂಡ್ ಗೆ ಮಧ್ಯವರ್ತಿ, ಸಚಿವರು, ಮುಖ್ಯಮಂತ್ರಿಗಳಿಗೆ ಮಧ್ಯವರ್ತಿಗಳು, ಶಾಸಕರು ಒಪ್ಪಿಕೊಂಡಿರುವ ಹಾಗೆ, ಶಾಸಕರು ಮಂತ್ರಿಗಳಿಗೆ, ಅಧಿಕಾರಿಗಳು ಶಾಸಕರಿಗೆ ಬ್ರೋಕರ್ ಗಳಾಗಿದ್ದಾರೆ. ಈ ಗೊಂದಲದ ಮಧ್ಯೆ, ಕೆಲವು ಪ್ರಕರಣಗಳಲ್ಲಿ ರೌಡಿ ಶೀಟರ್ ಗಳು ಬ್ರೋಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಈ ಸರ್ಕಾರ ನಡೆಸುತ್ತಿರುವವರು ಯಾರು ಎಂಬ ಗೊಂದಲಕ್ಕೆ ಜನ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.

ಎಲ್ಲ ಆಡಿಯೋ ಕ್ಲಿಪ್ ಕೇಳಿದರೆ ಆತ ಸುಳ್ಳು ಹೇಳುತ್ತಿಲ್ಲ, ಸತ್ಯ ಹೇಳುತ್ತಿದ್ದಾನೆ ಎಂದು ಅನುಸುತ್ತಿದೆ. ನಿನ್ನೆ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಫೋಟೋ ನೋಡಿದರೆ ಆತ ಗೃಹ ಸಚಿವರು, ಕಂದಾಯ ಸಚಿವರು, ಆರೋಗ್ಯ ಸಚಿವರು, ಮುಖ್ಯಮಂತ್ರಿ, ಅವರ ಕುಟುಂಬದ ಜತೆ ಡನಾಡ ಇಟ್ಟುಕೊಂಡಿದ್ದಾರೆ. ಇದನ್ನು ನೋಡಿದರೆ ಇದೆಲ್ಲವು ಸತ್ಯ ಎನಿಸುವುದಿಲ್ಲವೇ? ನಾನು ಗೃಹ ಸಚಿವರಿಂದ ಪೋಸ್ಟಿಂಗ್ ಕೊಡಿಸುತ್ತೇನೆ. ಮುಖ್ಯಮಂತ್ರಿಗಳೇ ನನಗೆ ಸಾರ್ ಎಂದರು. ಅಂದರೆ ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಹೋಗಿದೆ? ಅಧಿಕಾರ ಹಿಡಿಯಲು ಅವರು ಯಾರ ಕಾಲನ್ನು ಬೇಕಾದರೂ ಹಿಡಿಯುತ್ತೀರಾ? ಅಧಿಕಾರಕ್ಕಾಗಿ ಎತಹವರನ್ನು ಬಳಸಿಕೊಳ್ಳುತ್ತೀರಾ? ಪುಡಿ ರೌಡಿಯೊಬ್ಬ ನನಗೆ ಸಿಎಂ ನನಗೆ ಸಾರ್ ಎನ್ನುತ್ತಾರೆ ಎಂದರೆ ಸರ್ಕಾರಿ ಅಧಿಕಾರಿ, ಪೊಲೀಸ್ ಅಧಿಕಾರಿಗಳು ಕ್ಷಮೆ ಕೇಳುತ್ತಾರೆ ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular