ನಾನು, ಸಾರಾ ಮಹೇಶ್, ಮಂಜೇಗೌಡ ಸೇರಿ ಎಲ್ಲರೂ ಒಮ್ಮತದಿಂದ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಹೆಸರನ್ನು ಹೆಚ್,ಡಿ,ಕೋಟೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದ್ದೇವೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಹೆಚ್.ಡಿ.ಕೋಟೆ ಜೆಡಿಎಸ್ ಟಿಕೇಟ್ ಹಂಚಿಕೆ ವಿಚಾರವಾಗಿ ಆಗಿರುವ ಗೊಂದಲ ಕುರಿತು ಪ್ರತಿಕ್ರಿಯಿಸಿ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್, ಸಿ.ಎನ್.ಮಂಜೇಗೌಡ ಹಾಗೂ ಜಿಲ್ಲಾಧ್ಯಕ್ಷ, ಜಿಲ್ಲಾ ಯುವ ಘಟಕದ ಅಧ್ಯಕ್ಷರೆಲ್ಲರೂ ಚರ್ಚಿಸಿ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಅವರ ಹೆಸರನ್ನು ಅಂತಿಮಗೊಳಿಸಿದ್ದೇವೆ ಎಂದರು.
ಎಲ್ಲರೂ ಪ್ರಯತ್ನ ಮಾಡುವುದು ಸಹಜ. ಆದರೆ, ಅಂತಿಮವಾಗಿ ಗೆಲ್ಲಬೇಕಲ್ಲವೇ ಹೆಚ್.ಡಿ.ದೇವೇಗೌಡರು ಸಹ ಜಯಪ್ರಕಾಶ್ ಹೆಸರನ್ನೇ ಹೆಚ್,ಡಿ,ಕುಮಾರಸ್ವಾಮಿ ಅವರಿಗೂ ಹೇಳಿದ್ದು, ಜನವರಿ15 ರ ಬಳಿಕ ಅಭ್ಯರ್ಥಿ ಘೋಷಣೆ ಆಗಲಿದ್ದು, ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.


