ಡಾ.ಸಿ.ಎಸ್.ದ್ವಾರಕನಾಥ್
ನಮ್ಮ ಕಾಡುಗೊಲ್ಲರ ಹುಡುಗ ಮೋಹನನನ್ನು ನನಗೆ ಪರಿಚಯಿಸಿದ್ದು ಕಾಡುಗೊಲ್ಲ ನಾಗಣ್ಣ ಮತ್ತು ಕಾಡುಗೊಲ್ಲ ಹರ್ಷ. ಈ ಹುಡುಗ ಜುಂಜಪ್ಪನ ಸೊಲ್ಲುಗಳನ್ನು ಎದೆತುಂಬಿ ಹಾಡುವುದನ್ನು ಕಂಡು, ಕೇಳಿ ಬೆರಗಾಗಿದ್ದೆ!
ನಮ್ಮ ಕಾಡುಗೊಲ್ಲರ ಅಸ್ಮಿತೆಯ ಹೋರಾಟದಲ್ಲಿ ಸಕ್ರಿಯನಾಗಿದ್ದ ಈ ಮೋಹನ್ ನನ್ನ ಹುಟ್ಟು ಹಬ್ಬದ ದಿನದಂದು ನನಗಾಗಿ ಒಂದು ಜುಂಜಪ್ಪನ ಸೊಲ್ಲನ್ನು ಹಾಡಿ ವೈರಲ್ ಮಾಡಿದ್ದ! ಇದನ್ನು ಕೇಳಿದ ನಮ್ಮ ಹೆಣ್ಣೂರಿನ ವೇಣು ಈ ಹುಡುಗನ ವಿವರಗಳನ್ನು ನನ್ನಿಂದ ಪಡೆದು ಚಂಪಾಶೆಟ್ಟಿ ತಂಡ ಮಾಡುತ್ತಿದ್ದ “ಕೋಳಿ ಹೆಸರು” ಚಿತ್ರಕ್ಕೆ ಒಂದು ಹಾಡು ಹಾಡಿಸಿದ್ದರು.
ಈ ಹಾಡನ್ನು ಕೇಳಿದ ಅರ್ಜುನ್ ಜನ್ಯ ರವರು ಶಿವರಾಜಕುಮಾರ್ ನಟಿಸಿರುವ “ವೇದ” ಚಿತ್ರಕ್ಕೆ ಜುಂಜಪ್ಪನ ಹಾಡೊಂದನ್ನು ನಮ್ಮ ಕಾಡುಗೊಲ್ಲರ ಮೋಹನ್ ನಿಂದಲೇ ಹಾಡಿಸಿದ್ದಾರೆ! ಇಂದು ಆ ಹಾಡು ಬಿಡುಗಡೆಯಾಗಿದೆ.
“ಪಾನ್ ಇಂಡಿಯನ್” ದೇವರುಗಳ ವೈದಿಕ ವಿಜೃಂಭಣೆಯ ನಡುವೆ ನಮ್ಮ ಕಾಡುಗೊಲ್ಲರ ಅವೈದಿಕ ಆರಾದ್ಯ ದೈವ ಜುಂಜಪ್ಪ ಇತರೆ ಜನತೆಗೆ ತಲಪುತ್ತಿರುವುದು ಮತ್ತು ನಮ್ಮ ಕಾಡುಗೊಲ್ಲ ಮೋಹನ್ ದಿನದಿನಕ್ಕೂ ಹಾಡುಗಾರನಾಗಿ ಖ್ಯಾತಿಗೆ ಬರುತ್ತಿರುವುದು ನನ್ನ ಸಂತೋಷಕ್ಕೆ ಪಾರವಿಲ್ಲದಂತಾಗಿದೆ, ಈ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ.
ಲೇಖಕರು:- ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು.