ಕರ್ನಾಟಕದ ಕಲ್ಬುರ್ಗಿಯಲ್ಲಿ ಗಣೇಶ ಮೆರವಣಿಗೆಯಲ್ಲಿ ಮಸೀದಿಯ ಮುಂದೆ ಹಿಂಸಾಚಾರ ಬೆದರಿಕೆ ಹಾಕುವ ಸಾಹಿತ್ಯದ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆಯೋಜಕರ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.
ಮೆರವಣಿಗೆಗೂ ಮುನ್ನ ಧ್ವನಿವರ್ಧಕಗಳನ್ನು ಬಳಸಿ ಬೆದರಿಕೆ ಹಾಕಿದ್ದ ಬಿಜೆಪಿ ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಲ್ಲ ಎಂದು ದಿ ವೈರ್.ಕಾಮ್ ವರದಿ ಮಾಡಿದೆ.
ವಿಡಿಯೋಗಳಲ್ಲಿ ಮಸೀದಿಯ ಹೊರಗೆ ಮೋಜು ಮಸ್ತಿಯ ಮಾಡುತ್ತಿರುವ ದೃಶ್ಯಗಳು ದಾಖಲಾಗಿವೆ. ವಿಡಿಯೋಗಳಲ್ಲಿ ಧ್ವನಿವರ್ಧಕದ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈಸ್ ಧರ್ತಿ ಕೋ ಖೂನ್ ಸೇ ಹಮ್ ನೆಹ್ಲಾಯೇಂಗೆ, ಹಮ್ ತುಜ್ಕೋ ತೇರಿ ಓಕಾತ್ ದಿಖಾಯೇಂಗೆ ಎಂದು ಹೇಳಲಾಗುತ್ತದೆ. ನಾವು ಈ ಭೂಮಿಯನ್ನು ರಕ್ತದಲ್ಲಿ ಮುಳುಗಿಸುತ್ತೇವೆ. ನಿಮ್ಮ ಸ್ಥಳವನ್ನು ನಾವು ನಿಮಗೆ ತೋರಿಸುತ್ತೇವೆ ಎಂದು ಧ್ವನಿವರ್ಧಕದಲ್ಲಿ ಕೂಗುವುದು ಕೇಳಿಬರುತ್ತದೆ.
ಕ್ಲಿಪ್ ಗಳ ವಿಷಯಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಆದರೆ ಇದು ಸಂಗೀತವನ್ನು ನುಡಿಸಿದೆ ಎಂದು ಹಲವು ಮಂದಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹಿಂಸಾಚಾರದ ಬೆದರಿಕೆಯ ಸಾಹಿತ್ಯವನ್ನು ಹೊಂದಿರುವ ಹಿಂದಿ ಹಾಡುಗಳು ಹಾಕಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.
ಸೆಪ್ಟೆಂಬರ್ 9ರ ರಾತ್ರಿ ಮೆರವಣಿಗೆ ಮಾಡಲಾಯಿತು. ಪ್ರತ್ಯಕ್ಷದರ್ಶಿಗಳು ಪ್ರಕಾರ 2 ಗಂಟೆಗೆ ನೂರಾರು ಮಂದಿ ಭಾಗಿಯಾಗಿದ್ದ ಮೆರವಣಿಗೆಯು ಕಲ್ಬುರ್ಗಿಯ ಮೆಹಬಸ್ ಮಸೀದಿಯ ಸಮೀಪದಿಂದ ಹಾದು ಹೋಯಿತು. ಮುಂಜಾನೆ 4 ಗಂಟೆಯವರೆಗೂ ಸೌಂಡ್ ಸಿಸ್ಟಮ್ ಮೂಲಕ ಹಾಡುಗಳನ್ನು ಹಾಡುವುದು ಮುಂದುವರೆಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೊಲೀಸರು ಡಿಜೆಗಳನ್ನು ತಡೆಯಲು ಪ್ರಯತ್ನಿಸಿದರು. ಆದರೆ ಸಂಘಟಕರು ಪೊಲೀಸರೊಂದಿಗೆ ಸಹಕರಿಸಲಿಲ್ಲ ಎಂದು ಸ್ಥಳೀಯ ಮೊಹಮ್ಮದ್ ವಾಜಿದ್ ಅಹ್ಮದ್ ಹೇಳಿಕೆಯನ್ನು ಉಲ್ಲೇಖಿಸಿ ದಿ ವೈರ್ ವರದಿ ಮಾಡಿದೆ.


