ದೇಶದಲ್ಲಿ ಜೂನ್ ತಿಂಗಳಲ್ಲಿ ನಿರುದ್ಯೋಗ ದರವು ಶೇ 7.80ರಷ್ಟಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ದತ್ತಾಂಶ ತಿಳಿಸಿದೆ.
ಸಿಎಂಐಇ ಬಿಡಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 13 ಮಿಲಿಯನ್ ಉದ್ಯೋಗಗಳು ಕಳೆದುಹೋದ ಕಾರಣ ನಿರುದ್ಯೋಗ ದರ ಹೆಚ್ಚಾಗಿದೆ. ಆದಾಗ್ಯೂ ನಿರುದ್ಯೋಗಿಗಳ ಸಂಖ್ಯೆ 3 ಮಿಲಿಯನ್ ಹೆಚ್ಚಾಗಿದೆ. ಇತರ 10 ಮಿಲಿಯನ್ ಜನರು ಕಾರ್ಮಿಕ ಮಾರುಕಟ್ಟೆಯಿಂದ ನಿರ್ಗಮಿಸಿದ್ದಾರೆ.
ಕೃಷಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ನಿರುದ್ಯೋಗಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮೇ ತಿಂಗಳಲ್ಲಿ ಶೇ. 6.62ರಷ್ಟು ಇದ್ದುದು ಜೂನ್ ತಿಂಗಳಲ್ಲಿ 8.03ಕ್ಕೆ ಏರಿಕೆಯಾಗಿದೆ. ಆದರೆ ನಗರ ಪ್ರದೇಶದಲ್ಲಿ ನಿರುದ್ಯೋಗ ದರವು ಮೇನಲ್ಲಿ 7.12% ರಿಂದ ಜೂನ್ ನಲ್ಲಿ 7.30%ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿಕೆಯನ್ನು ಉಲ್ಲೇಖಿಸಿರುವ ಪಿಟಿಐ ಸುದ್ದಿ ಸಂಸ್ಥೇ, ಲಾಕ್ ಡೌನ್ ಅಲ್ಲದ ತಿಂಗಳಲ್ಲಿ ಉದ್ಯೋಗದಲ್ಲಿ ಇದು ಅತಿದೊಡ್ಡ ಕುಸಿತವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ವಿರಾಮ ಇರುವಾಗ ಇದು ಋತುಮಾನದ ಹಂತವಾಗಿದೆ. ಬಿತ್ತನೆ ಪ್ರಾರಂಭವಾದ ಜುಲೈನಲ್ಲಿ ಇದು ಹಿಂತಿರುಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಜೂನ್ ತಿಂಗಳ ಸಂಬಳದ ಉದ್ಯೋಗಗಳು ಹೆಚ್ಚುತ್ತಿರುವ ದುರ್ಬಲತೆಯನ್ನು ಬಹಿರಂಗಪಡಿಸಿವೆ. ಸರ್ಕಾರ ಸಶಸ್ತ್ರ ಸಿಬ್ಬಂದಿಯ ಬೇಡಿಕೆಯನ್ನು ಕುಗ್ಗಿಸಿತು ಮತ್ತು ಖಾಸಗಿ ಈಕ್ವಿಟಿ ನಿಧಿಯ ಹೊಸ ಪ್ರಪಂಚದ ಉದ್ಯೋಗಗಳಲ್ಲಿನ ಅವಕಾಶಗಳು ಸಹ ಕುಗ್ಗಲು ಪ್ರಾರಂಭಿಸಿದವು ಎಂದು ಹೇಳಿದ್ದಾರೆ.
ಕೌನ್ಸಿಲ್ ಫಾರ್ ಸೋಶಿಯಲ್ ಡೆವಲಪ್ ಮೆಂಟ್ ನ ನಿರ್ದೇಶಕಿ ಮತ್ತು ಅರ್ಥಶಾಸ್ತ್ರಜ್ಞೆ ಡಾ. ನಿತ್ಯಾ ನಂದ್ ನನ್ನ ದೃಷ್ಟಿಯಲ್ಲಿ ಜೂನ್ 2022ರಲ್ಲಿ ನಿರುದ್ಯೋಗ ದರವು ಜೂನ್ 2019ಕ್ಕಿಂತ ಹೆಚ್ಚಾಗಿದೆ. ಇದು ಕಳವಳಕಾರಿ ವಿಷಯವಾಗಿದೆ. ನನ್ನ ದೃಷ್ಟಿಯಲ್ಲಿ ನಾವು ಇನ್ನೂ ಕೋವಿಡ್-19ರ ಪ್ರಭಾವದಿಂದ ಹೊರಬಂದಿಲ್ಲ ಎಂಬ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.
ಹರಿಯಾಣದಲ್ಲಿ ನಿರುದ್ಯೋಗವು 30.06%, ರಾಜಸ್ಥಾನದಲ್ಲಿ 29.8%, ಅಸ್ಸಾಂ, ಜಮ್ಮು-ಕಾಶ್ಮೀರದಲ್ಲಿ 17.2% ಮತ್ತು ಬಿಹಾರದಲ್ಲಿ ಶೇ.14% ಎಂದು ಸಿಎಂಐಇ ಡೇಟಾ ತೋರಿಸಿದೆ.
ವಿಶ್ವ ಬ್ಯಾಂಕ್ ನ 2021ರ ಮಾಹಿತಿಯ ಪ್ರಕಾರ ಭಾಋತದ ದುಡಿಯುವ ವಯಸ್ಸಿನ ಜನಸಂಖ್ಯೆಯ 43%ರಷ್ಟು ಮಾತ್ರ ಉದ್ಯೋಗವನ್ನು ಹೊಂದಿದೆ. ಈ ಅಂಕಿ ಅಂಶವು ಬಾಂಗ್ಲಾದೇಶಕ್ಕಿಂತ 54%ಕ್ಕಿಂತ ಕಡಿಮೆಯಾಗಿದೆ. ಪಾಕಿಸ್ತಾನ ಕೂಡ 48%ರಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದೆ.


