ಸುಪ್ರೀಂಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಭಾಷಣದ ಆಯ್ದ ಭಾಗಗಳ ಅನುವಾದ-1
ತುಮಕೂರಿನಲ್ಲಿ ಮಾರ್ಚ್ 13ರಂದು ಜನಾಂದೋಲನಗಳ ಮಹಾಮೈತ್ರಿ-ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಜನಪರ-ಪ್ರಗತಿಪರ ಸಂಘಟನೆಗಳ ಸಹಕಾರದಿಂದ ಕರ್ನಾಟಕದಿಂದ 3 ಕೃಷಿ ಕಾಯ್ದೆಗಳ ವಾಪಸಾತಿ-ಸಾಮಾಜಿಕ ಸಾಮರಸ್ಯಕ್ಕಾಗಿ ಸೂಫಿ-ಸಂತ-ಶರಣರ ಸಂದೇಶ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಭಾಷಣ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಮಾನವೀಯ, ನ್ಯಾಯಯುತ ಮತ್ತು ಗೌರವಯುತ ಮೌಲ್ಯಗಳನ್ನು ಧ್ವಂಸ ಮಾಡಲಾಗುತ್ತಿದೆ. ದೇಶವನ್ನು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ನಾಶಪಡಿಸಲಾಗುತ್ತಿದೆ. ಸುಳ್ಳು ಪ್ರಚಾರ ವ್ಯಾಪಕವಾಗಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ಪ್ರತಿಯೊಂದು ಮೌಲ್ಯವನ್ನು ನಾಶಪಡಿಸುತ್ತಿದೆ. ಮಾನವೀಯತೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ದೇಶದಲ್ಲಿ ಏನೆಲ್ಲ ಅವಾಂತರಗಳು ನಡೆಯುತ್ತಿವೆ ಅದೆಲ್ಲಕ್ಕೂ ಬಿಜೆಪಿ ಸರ್ಕಾರವೇ ಕಾರಣವಾಗಿದೆ.
ಪ್ರಸ್ತುತ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಆರ್.ಎಸ್ಎಸ್ ಹೇಳಿದಂತೆ ದ್ವೇಷವನ್ನು ಹರಡಲಾಗುತ್ತಿದೆ. ಹಿಂದೂ ಮತ್ತು ಮುಸ್ಲೀಮರ ನಡುವೆ, ಹಿಂದೂ ಮತ್ತು ಸಿಖ್ಖರು ಸೇರಿ ಇತರ ಧರ್ಮಗಳ ನಡುವೆ ದ್ವೇಷವನ್ನು ಹರಡಿ ಶಾಂತಿಗೆ ಭಂಗ ತರುತ್ತಿದೆ. ಇಷ್ಟೇ ಅಲ್ಲ ತಪ್ಪು ಕತೆಗಳನ್ನು, ತಪ್ಪುತಪ್ಪಾದ ಮಾಹಿತಿಗಳನ್ನು ಹಂಚುತ್ತದ ಸಮಾಜದ ನೆಮ್ಮದಿ ಕೆಡಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿ ಮತ್ತು ನೆಹರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಬಿಟ್ಟು ತಿರುಚಿದ ಫೋಟೋಗಳು, ವಿಡಿಯೋಗಳು ಮತ್ತು ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ. ಈ ಮೂಲಕ ಜನರ ನಡುವೆ ವಿಷಕಾರಿ ವಿಷಯಗಳನ್ನು ಬಿತ್ತಲಾಗುತ್ತಿದೆ.
ಮುಸ್ಲೀಮರು, ಕ್ರಿಶ್ಚಿಯನ್ನರು, ಸಿಖ್ಖರು, ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ದೇಶದ ಜನರು ನಡುವೆ ದ್ವಷದ ವಾತಾವರಣವನ್ನು ಹುಟ್ಟುಹಾಕಲಾಗುತ್ತಿದೆ. ನೆಹರು ಮತ್ತು ಗಾಂಧಿ ಬಗ್ಗೆ ತಿರುಚಿದ ಸುದ್ದಿಗಳನ್ನು ಹರಿಯಬಿಟ್ಟು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ದೇಶದಲ್ಲಿ ಈವರೆಗೆ ದೇಶದಲ್ಲಿ ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದ್ದ ಮೌಲ್ಯಗಳಿಗೆ ವಿರುದ್ಧವಾಗಿ ದ್ವೇಷದ ಮತ್ತು ಭಯದ ವಾತಾವರಣವನ್ನು ದೇಶದ ನಾಗರಿಕರ ನಡುವೆ ಉಂಟು ಮಾಡಲಾಗುತ್ತಿದೆ.
ಸ್ವಾತಿ ಚತುರ್ವೇದಿ ಪುಸ್ತಕದಲ್ಲಿ ಹೇಳಿರುವಂತೆ ಬಿಜೆಪಿ ಹೇಗೆ ಶಾಂತಿ, ನೆಮ್ಮದಿಯಿಂದ ಇರುವ ಸಮಾಜದಲ್ಲಿ ದ್ವೇಷವನ್ನು ಹೇಗೆ ಹರಡಲಾಗುತ್ತಿದೆ ಎಂದು ಹೇಳಿದೆ. ಬಿಜೆಪಿಯ ಐಟಿ ಸೆಲ್ ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ನಿರತವಾಗಿದೆ. ಈ ಐಟಿ ಸೆಲ್ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ಥಾಪಿಸಲಾಗಿದೆ. ಆದರೂ ಇಲ್ಲಿ ದ್ವಷಪೂರಿತ, ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಸಮಾಜದಲ್ಲಿ ಹರಿಯಬಿಟ್ಟು ಜನರಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಕೇವಲ ದ್ವೇಷ ಹರಡುವುದು ಮಾತ್ರವಲ್ಲ, ಭಯವನ್ನು ಹುಟ್ಟುಹಾಕಲಾಗುತ್ತಿದೆ.
ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಬಿಜೆಪಿಯ ಐಟಿ ಸೆಲ್ ಸಂಭ್ರಮಾಚರಣೆ ಮಾಡಿತು. ಬಲಪಂಥೀಯ ಗುಂಪುಗಳು ಸಂಭ್ರಮಿಸಿದವು. ಸಾಮಾಜಿಕ ಜಾಲತಾಣದಲ್ಲಿ ಇದು ನಡೆಯಿತು. ಪ್ರಧಾನಿಯವರೂ ಕೂಡ ಇದನ್ನು ಗಮನಿಸಿದ್ದರು. ಇಂತಹ ಕೀಳು ಸಂಸ್ಕೃತಿಯನ್ನು ಹರಡುತ್ತಿದ್ದರೂ ಅದನ್ನು ತಡೆಯುವ ಗೋಜಿಗೆ ಯಾರೂ ಹೋಗಲಿಲ್ಲ.
ಇಂದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಬೇಕಾಗಿದೆ. ಪ್ರಜಾತಾಂತ್ರಿಕ ವಾತಾವರಣವನ್ನು ಸಂರಕ್ಷಿಸಬೇಕಾಗಿದೆ. ಇಂದು ಬಿಜೆಪಿ ಸರ್ಕಾರ ನ್ಯಾಯಾಂಗ, ಪತ್ರಿಕಾರಂಗ, ಆಡಿಟ್ ಅಂಡ್ ಕಂಟ್ರೋಲ್ ಆಫ್ ಇಂಡಿಯ, ನಾಗರಿಕ ಸೇವೆಗಳು ಮತ್ತು ವಿಶ್ವವಿದ್ಯಾಲಯ ಸೇರಿ ಸಾರ್ವಜನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸುವ ಕೆಲಸ ನಡೆಯುತ್ತಿದೆ. ನಾವು ಇಂದು ಕ್ಲಿಷ್ಟಕರ ಸನ್ನಿವೇಶದಲ್ಲಿದ್ದೇವೆ.
ಮುಂದುವರೆಯುವುದು


