ನೈನಿತಾಲ್ ನಲ್ಲಿ ಇರುವ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ನಿವಾಸವನ್ನು ದುಷ್ಕರ್ಮಿಗಳ ಗುಂಪೊಂದು ಧ್ವಂಸಗೊಳಿಸಿದೆ ಮತ್ತು ಬೆಂಕಿ ಹಚ್ಚಿ ಗದ್ದಲವೆಬ್ಬಿಸಿದೆ.
ಖುರ್ಷಿದ್ ಅವರು ‘ಸನ್ ರೈಸ್ ಓವರ್ ಅಯೋಧ್ಯೆ: ನೇಷನ್ ಹುಡ್ ಇನ್ ಅವರ್ ಟೈಮ್ಸ್ ಕೃತಿಯಲ್ಲಿ ಹಿಂದುತ್ವವನ್ನು ಐಸಿಸ್ ಮತ್ತು ಬೊಕೊ ಹರಾಮ್ ನಂತಹ ಭಯೋತ್ಪಾದಕ ಗುಂಪುಗಳ ಜಿಹಾದಿಸ್ಟ್ ಗೆ ಹೋಲಿಸಿ ವಿವಾದ ಹುಟ್ಟಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
ಖುರ್ಷಿದ್ ಅವರಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ದಾಳಿಯ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಸುಟ್ಟುಹೋದ ಬಾಗಿಲುಗಳು ಮತ್ತು ಮುರಿದ ಕಿಟಕಿಯ ಗಾಜುಗಳನ್ನು ಪುಡಿ ಮಾಡಿರುವ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
ಈ ಕಪ್ಪು ಕಾರ್ಡ್ ಅನ್ನು ತೊರೆದು ನನ್ನ ಸ್ನೇಹಿತರಿಗೆ ಈ ಬಾಗಿಲುಗಳನ್ನು ತೆರೆಯಲು ನಾನು ಆಶಿಸಿದ್ದೇನೆ. ನಾನು ಇನ್ನೂ ಒಂದು ದಿನ ತರ್ಕ ಮಾಡಬಹುದು. ಇಲ್ಲವೆ ಒಪ್ಪುವುದಿಲ್ಲ ಎಂದು ಹೇಳಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ದಾಳಿಯಲ್ಲಿ ಭಾಗಿಯಾದ ಆರೋಪದ ಮೇಲೆ ರಾಕೇಶ್ ಕಪಿಲ್ ಮತ್ತು ಇತರೆ 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಐ ನೀಲೇಶ್ ಆನಂದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.


