ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಸರಾ ಹಬ್ಬದಲ್ಲಿ ದುರ್ಗಾಮಾತೆಗೆ ಪೂಜಿಸುವ ಬದಲು ಕ್ಯಾಮೆರಾ ಕಡೆ ಪೂಜೆ ಸಲ್ಲಿಸಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಒಳಗಾಗಿದ್ದಾರೆ. ಕ್ಯಾಮೆರಾ ಪೂಜೆಗೆ ಅರ್ಹವಾಗಿದೆ ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವ್ಯಂಗ್ಯ ಮಾಡಲಾಗಿದೆ.
ಯೋಗಿ ಅಲಂಕಾರಿ ಶಿರಸ್ತ್ರಾಣ ಧರಿಸಿ ಮೇಣದ ಬತ್ತಿಯಲ್ಲಿ ಆರತಿ ಬೆಳಗುತ್ತಿರುವುದು ಅತ್ಯಂತ ಗೌರವಾನ್ವಿತವಾದುದು. ‘ಛಾಯಾಗ್ರಾಹಕನ ಕಡೆ ತಿರುಗಿ ಅರತಿ ಮಾಡುವುದು ಏನು ಪುಣ್ಯವೋ? ಯಾರನ್ನು ಪ್ರಾರ್ಥಿಸಬೇಕು ಎಂದು ತಿಳಿದಿಲ್ಲದ ಕಾರಣ ಭಗವಂತ ಅವನನ್ನು ಕ್ಷಮಿಸಬೇಕು’ ಟ್ವಿಟ್ಟರಿಗರು ಲೇವಡಿ ಮಾಡಿದ್ದಾರೆ.
ಮಾತೃದೇವಿ ರಂಜಿಸುವುದಿಲ್ಲ. ಅವಳು ಸ್ಪಷ್ಟವಾಗಿ ಕೆರಳಿದ್ದಾಳೆ ಎಂದು ಆಕ್ರೋಶ ವ್ಯಕ್ತವಾಗಿದೆ.
“ನಾವು ಕೊಠಡಿಯಲ್ಲಿ 360 ಡಿಗ್ರಿ ವೀಕ್ಷಣೆಯನ್ನು ಹೊಂದಿಲ್ಲ. ಕ್ಯಾಮೆರಾಮನ್ ಹಿಂದೆ ಅಥವಾ ತಕ್ಷಣ ಪಕ್ಕದಲ್ಲಿ ವಿಗ್ರಹಗಳು ಇರುತ್ತವೆ. ಯೋಗಿ ಆ ವಿಗ್ರಹಗಳಿಗೆ ಆರತಿಯನ್ನು ಮಾಡಬೇಕು. ಮುಖ್ಯಕೋಣೆ ಅಥವಾ ಗರ್ಭಗೃಹದ ಬದಿ ಮತ್ತು ಹಿಂಭಾಗದಲ್ಲಿ ವಿಗ್ರಹಗಳು ಮಂದಿರದಲ್ಲಿ ಇರುವುದು ಸಾಮಾನ್ಯ. ನೀವು ದ್ವೇಷಿಸುವ ಎಲ್ಲವನ್ನು ಅಪಹಾಸ್ಯಮಾಡುವ ಮೊದಲು ಯೋಚಿಸಿ” ವ್ಯಂಗ್ಯ ಮಾಡಿರುವ ಟ್ವೀಟ್ ಗಳು ಇವೆ.
49 ನಿಮಿಷ ಇರುವ ವಿಡಿಯೋದಲ್ಲಿ ಯೋಗಿ ಆದಿತ್ಯನಾಥ್ ಬಲಭಾಗ ಮತ್ತು ಎಡಭಾಗದ ಕಡೆ ತಿರುಗಿದರೂ ಕ್ಯಾಮೆರಾದತ್ತ ಮುಖ ಮಾಡಿ ಪೂಜೆ ಮಾಡುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದೊಂದು ಬೂಟಾಟಿಕೆ ಪೂಜೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಓಂ ನಮೋ ಕ್ಯಾಮೆರಾಮನಾಯ ನಮಃ” ಯುವ ಕಾಂಗ್ರೆಸ್ ಕಾರ್ಯಕರ್ತರು ಅಪಹಾಸ್ಯ ಮಾಡಿದ್ದಾರೆ.