Sunday, March 15, 2026
Google search engine
Homeಮುಖಪುಟಆರೋಪಿಗಳಿಗೆ ಸಿಎಂ ರಕ್ಷಣೆ - ಪ್ರಿಯಾಂಕ ಆರೋಪ

ಆರೋಪಿಗಳಿಗೆ ಸಿಎಂ ರಕ್ಷಣೆ – ಪ್ರಿಯಾಂಕ ಆರೋಪ

ಲಖಿಂಪುರಖೇರಿ ರೈತರ ಹತ್ಯೆಯ ಪ್ರಮುಖ ಆರೋಪಿ ಅಶಿಶ್ ಮಿಶ್ರಾ ಮತ್ತು ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ರಕ್ಷಿಸುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆರೋಪಿಸಿದರು.

ಉತ್ತರಪ್ರದೇಶದ ಪ್ರಧಾನಿ ಕ್ಷೇತ್ರ ವಾರಣಾಸಿಯಲ್ಲಿ ಕಿಸಾನ್ ನ್ಯಾಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಗಾಂಧಿ “ಯಾವುದೇ ದೇಶದಲ್ಲಿ ಹತ್ಯೆಯಾದ ವ್ಯಕ್ತಿಯ ಕುಟುಂಬದವರೊಂದಿಗೆ ಮಾತನಾಢಲು ಪೊಲೀಸರಿಂದ ಆಹ್ವಾನ ಪಡೆದ ಬಗ್ಗೆ ಕೇಳಿಲ್ಲ ಎಂದು ಟೀಕಿಸಿದರು.

ವಾರಣಾಸಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಿಸಾನ್ ನ್ಯಾಯ್ ರ್ಯಾಲಿಯಲ್ಲಿ ಜನಸ್ತೋಮ

ಪ್ರಧಾನಿ ನರೇಂದ್ರ ಮೋದಿ, “ಪ್ರತಿಭಟನಾನಿರತ ರೈತರನ್ನು ಆಂದೋಲನ ಜೀವಿಗಳು ಮತ್ತು ಭಯೋತ್ಪಾದಕರೆಂದು ಕರೆದಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರೈತರನ್ನು ಗೂಂಡಾಗಳು ಎಂದು ಬೆದರಿಸುವ ಯತ್ನ ಮಾಡಿದರು. ಸಚಿವ ಅಜಯ್ ಕುಮಾರ್ ಮಿಶ್ರಾ 2ನಿಮಿಷದಲ್ಲಿ ರೈತರನ್ನು ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳುತ್ತಾರೆ. ಇದೆಲ್ಲವೂ ಪ್ರಚೋದನೆ ಅಲ್ಲವೇ?” ಎಂದು ಪ್ರಿಯಾಂಕ ಪ್ರಶ್ನಿಸಿದರು.

“ಪ್ರಧಾನಿ ನರೇಂದ್ರ ಮೋದಿ ವಿಶ್ವ ಪ್ರವಾಸ ಕೈಗೊಳ್ಳುತ್ತಾರೆ. ಆದರೆ ಅವರಿಗೆ ದೇಶದ ರೈತರನ್ನು ಭೇಟಿ ಮಾಡಲು ಸಮಯವಿಲ್ಲ. ರೈತರ ಸಮಸ್ಯೆಗಳನ್ನು ಕೇಳುತ್ತಿಲ್ಲ.” ಎಂದು ಟೀಕಿಸಿದರು.

ಕಳೆದ ಎರಡು ವರ್ಷಗಳಲ್ಲಿ ನಾನು ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದೇನೆ. ಎರಡು ವರ್ಷಗಳ ಹಿಂದೆ ಸೋನಭದ್ರದಲ್ಲಿ ನಡೆದ ಭೂ ವಿವಾದದಲ್ಲಿ 13 ಆದಿವಾಸಿಗಳು ಮೃತಪಟ್ಟರು. ಆಡಳಿತಾರೂಢ ಬಿಜೆಪಿಯ ಕೆಲವು ನಾಯಕರು ಈ ವಿವಾದದಲ್ಲಿ ಭಾಗಿಯಾಗಿದ್ದು ಜನರು ನ್ಯಾಯದ ಭರವಸೆ ಹೊಂದಿಲ್ಲ ಎಂದು ಹೇಳಿದರು. ನಾನು ಅಲ್ಲಿಗೆ ಹೋದೆ. ಪ್ರತಿಯೊಬ್ಬ ಸಂತ್ರಸ್ತರ ಕುಟುಂಬಗಳು ತಮಗೆ ನ್ಯಾಯಬೇಕು ಎಂದು ಕೇಳಿದರು ಎಂದು ಪ್ರಿಯಾಂಕ ತಿಳಿಸಿದರು.

ನಂತರ ಹತ್ರಾಸ್ ಘಟನೆ ಸಂಭವಿಸಿತು. ಈ ಸಂದರ್ಭದಲ್ಲಿ ಸರ್ಕಾರ ಆರೋಪಿಯನ್ನು ರಕ್ಷಿಸಿತು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ಯಾವುದೇ ನ್ಯಾಯ ಸಿಗಲಿಲ್ಲ. ಲಖಿಂಪುರಖೇರಿಯ ಸಚಿವರ ಪುತ್ರನಿಂದ ರೈತರ ಹತ್ಯೆಯಾಗಿದೆ. ಈಗಲೂ ಯುಪಿ ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆ ಎಂದು ದೂರಿದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ರಾಜಿನಾಮೆ ಸಲ್ಲಿಸುವವರೆಗೂ ಲಖಿಂಪುರ್ ವಿಚಾರದಲ್ಲಿ ಕಾಂಗ್ರೆಸ್ ಹೋರಾಟವನ್ನು ಮುಂದುವರಿಸಲಿದೆ ಎಂದು ಪ್ರಿಯಾಂಕ ಗಾಂಧಿ ಘೋಷಿಸಿದರು.

ಪ್ರಪಂಚದಲ್ಲಿ ಎಲ್ಲಿಯೂ ಆರೋಪಿಯ ಹೇಳಿಕೆಯನ್ನು ದಾಖಲಿಸಲು ಪೊಲೀಸರು ಆಹ್ವಾನ ಕಳಿಸುವುದಿಲ್ಲ. ಆದರೆ ಲಖಿಂಪುರದಲ್ಲಿ ಸಚಿವರ ಪುತ್ರನಿಗೆ ತನ್ನ ಹೇಳಿಕೆ ನೀಡಲು ಆಹ್ವಾನಿಸಲಾಯಿತು. ಹೀಗಾದರೆ ನ್ಯಾಯ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಪ್ರಧಾನಿ ತಮಗಾಗಿ ಎರಡು ವಿಮಾನ ಖರೀದಿಸಿದ್ದಾರೆ. ಪ್ರತಿಯೊಂದಕ್ಕೂ 8 ಸಾವಿರ ಕೋಟಿ ವೆಚ್ಚವಾಗಿದೆ. ಎರಡು ವಿಮಾನಗಳಿಂದ ದೇಶಕ್ಕೆ 16 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಮೋದಿ ತನ್ನ ಸ್ನೇಹಿತರಿಗೆ ಅನುಕೂಲವಾಗುವಂತೆ ಏರ್ ಇಂಡಿಯಾವನ್ನು 18 ಸಾವಿರ ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಆಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular