ಅಖಿಲ ಭಾರತ ಕಾಂಗ್ರಸ್ ಪಕ್ಷಕ್ಕೆ ಖಾಯಂ ಅಧ್ಯಕ್ಷರು ಬೇಕು ಎಂದು ತಿರುವನಂತಪುರ ಲೋಕಸಭಾ ಸದಸ್ಯ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಈಗ ಹಂಗಾಮಿ ಅಧ್ಯಕ್ಷರು ಇದ್ದಾರೆ. ಪಕ್ಷಕ್ಕೆ ಖಾಯಂ ಅಧ್ಯಕ್ಷರು ಇರಬೇಕು. ನಾವು ಸೋನಿಯಾ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ. ಆದರೂ ಖಾಯಂ ಅಧ್ಯಕ್ಷರು ಬೇಕು ಎಂದು ಹೇಳಿದ್ದಾರೆ.
ಕಳೆದ 2 ವರ್ಷದಿಂದ ಪಕ್ಷಕ್ಕೆ ಹಂಗಾಮಿ ಅಧ್ಯಕ್ಷರು ಇದ್ದಾರೆ. ಖಾಯಂ ಅಧ್ಯಕ್ಷರ ಬಗ್ಗೆ ಎಲ್ಲರೂ ನೆನಪು ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನಮಗೆ ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಲು ಶಕ್ತಿ ತುಂಬುವವರು ಬೇಕು. ನಾವು ರಾಹುಲ್ ಗಾಂಧಿ ನಾಯಕತ್ವದಡಿ ಹೋಗಬೇಕಾಗಿದೆ ಎಂದು ಸಲಹೆ ಮಾಡಿದ್ದಾರೆ.


