Wednesday, March 25, 2026
Google search engine
Homeಮುಖಪುಟಸಾಹಿತಿ ಡಾ.ಓ.ನಾಗರಾಜ್ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಸಾಹಿತಿ ಡಾ.ಓ.ನಾಗರಾಜ್ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ 50 ರಿಂದ 60ರ ವಯೋಮಾನದ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ 2025ನೇ ಸಾಲಿಗೆ ತುಮಕೂರು ಜಿಲ್ಲೆಯ ಹಿರಿಯ ಸಾಹಿತಿ ಡಾ.ಓ.ನಾಗರಾಜ್ ಆಯ್ಕೆಯಾಗಿದ್ದಾರೆ.

ಕುರುಂಗರಾಜ ವೈಭವ, ಹಟ್ಟಿ ಅರಳಿ ಹೂವಾಗಿ, ಪಲ್ಲಟ, ಹಿಂದೂಪುರ ಕಾದಂಬರಿ ಸೇರಿದಂತೆ ಒಟ್ಟು 11 ಕೃತಿಗಳನ್ನು ರಚಿಸಿರುವ ಡಾ. ಓ. ನಾಗರಾಜು ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಮಾ.25ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಒಟ್ಟು 10 ಮಂದಿ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಬಳ್ಳಾರಿಯ ಸಾಹಿತಿ ಡಾ.ನಿಷ್ಠಿ ರುದ್ರಪ್ಪ, ಬಾಗಲಕೋಟೆಯ ಡಾ.ವೀರೇಶ ಬಡಿಗೇರ, ತುಮಕೂರು ಜಿಲ್ಲೆಯ ಡಾ.ಸಿ.ಜಿ.ಲಕ್ಷ್ಮೀಪತಿ, ಬೆಂಗಳೂರಿನ ಕಂನಾಡಿಗ ನಾರಾಯಣ, ಹಾಸನ ಜಿಲ್ಲೆಯ ರೂಪ ಹಾಸನ, ವಿಜಯವಾಡದ ಜಯರಾಮ್ ರಾಯಪುರ, ದಾವಣಗೆರೆ ಜಿಲ್ಲೆಯ ಕುಮುದಾ ಸುಶೀಲ್, ಮಂಗಳೂರಿನ ಬಿ.ಎಂ.ಬಷೀರ್, ಬೆಂಗಳೂರಿನ ಡಾ.ಜ್ಯೊತಿ ಅವರನ್ನು ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular