ತುಮಕೂರು ನಗರದ ಬಿಷೆಪ್ ಸಾರ್ಜೆಂಟ್ ಶಾಲೆಯ ಮೈದಾನದಲ್ಲಿ ಶನಿವಾರ ಎರಡು ದಿನಗಳ ಕಾಲ ನಡೆಯುವ ಕ್ರಿಶ್ಚಿಯನ್ ಪ್ರಿಮಿಯರ್ ಲೀಗ್-2026 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಸಿ.ಎಸ್.ಐ ಒಕ್ಕೂಟಗಳ ತುಮಕೂರು ಏರಿಯಾ ಕೌನ್ಸಿಲ್ ಅಧ್ಯಕ್ಷ ಫಾದರ್ ಮನೋಜ್ಕುಮಾರ್ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಶ್ಚಿಯನ್ ಪ್ರಿಮಿಯರ್ ಲೀಗ್-2026 ಆರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆ ಜನರಲ್ಲಿ ಒಗ್ಗುಟ್ಟು, ಪರಸ್ವರ ಪ್ರೀತಿಯನ್ನು ಮೂಡಿಸಲು ಸಹಕಾರಿಯಾಗಿದೆ. ಸಿಎಸ್ಐ ಒಕ್ಕೂಟದ ಯುವಜನರಿಂದ ಕ್ರೀಡಾಕೂಟ ನಡೆಸಬೇಕೆಂಬ ಮನವಿ ಬಂದಾಗ, ಅದನ್ನು ಪರಿಶೀಲಿಸಿ, ಒಳ್ಳೆಯ ಉದ್ದೇಶದಿಂದ ನಡೆಸುವ ಕ್ರಿಶ್ಚಿಯನ್ ಪ್ರಿಮಿಯರ್ ಲೀಗ್-2026 ನಡೆಸಲು ಒಪ್ಪಿಗೆ ಸೂಚಿಸಲಾಯಿತು ಎಂದರು.
ಯುವಜನರು ಕ್ರೀಡೆಯ ಹೆಸರಿನಲ್ಲಿ ಒಂದೆಡೆ ಒಗ್ಗೂಡಿ, ನಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು, ಆಟವಾಡುವ ಮೂಲಕ ಪರಸ್ವರನ್ನು ಗೌರವಿಸುವ ಕೆಲಸ ಆಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ಏರಿಯ ಕೌನ್ಸಿಲ್ನ ಫಾದರ್ ಸುಧೀರ್, ಉಪಾಧ್ಯಕ್ಷ ಕುಸುಮಾಂಜಲಿ, ಖಜಾಂಚಿ ಸಾವಂತ್, ಸಭಾ ಕಾರ್ಯದರ್ಶಿ ಡ್ಯಾನಿಯಲ್, ಸ್ಯಾಮಸಾಂಗ್, ವೇದು, ಸತ್ಯಸಮಾಧಾನ, ರೆವರೆಂಡ್ ಸುನಿತಾ, ರೀಟಾ, ರವಿ ಇದ್ದರು.
ಸಿಎಸ್ಐ ಒಕ್ಕೂಟ ತುಮಕೂರು ಏರಿಯಾ ಕೌನ್ಸಿಲ್ ವ್ಯಾಪ್ತಿಗೆ ಒಳಪಡುವ ತುಮಕೂರು ಗುಬ್ಬಿ, ಕುಣಿಗಲ್, ತಿಪಟೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಸುಮಾರು 8 ತಂಡಗಳು ಕ್ರಿಶ್ಚಿಯನ್ ಪ್ರಿಮಿಯರ್ ಲೀಗ್-2026ರಲ್ಲಿ ಪಾಲ್ಗೊಳ್ಳುತಿದ್ದು, ಲೀಗ್ ಹಂತದಲ್ಲಿ 12, ಎರಡು ಸೆಮಿಫೈನಲ್ ಹಾಗೂ ಒಂದು ಫೈನಲ್ ಮ್ಯಾಚ್ ಸೇರಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಐಪಿಎಲ್ ಮಾದರಿಯಲ್ಲಿಯೇ ಸಮುದಾಯದ ಪ್ರತಿಭಾವಂತ ಆಟಗಾರರನ್ನು ಒಂದಡೆ ಸೇರಿಸಿ, ಅವರನ್ನು ಹರಾಜಿನ ಮೂಲಕ ಎಂಟು ತಂಡಗಳ ಮಾಲೀಕರು ಖರೀದಿಸಿ,ಆಟವಾಡಲು ಕರೆ ತಂದಿದ್ದು, ಕ್ರಿಶ್ಚಿಯನ್ ಪ್ರಿಮಿಯರ್ ಲೀಗ್-2026ರಲ್ಲಿ ದಾಸ್ ಚಾಲೆಂರ್ಸ್, ಸ್ಟೇನ್ ರಾಯಲ್ ಚಾಲೆಂರ್ಸ್,ವೆಸ್ಲಿ ಟೈಟಾನ್,ರಾಕ್ ವೆಸ್ಲಿ,ದೇವನೂರು ಸೂಪರ್ ಕೀಗ್ಸ್, ಡೇವಿಡ್ ಸನ್ಸ್ ವಾರಿಯರ್ ಕುಣಿಗಲ್, ಸ್ಟೇನ್ ಸೂಪರ್ ಕಿಂಗ್ಸ್, ಎಫೆಸಿಯನ್ಸ್ ಈಗಲ್ಸ್ ತಂಡಗಳು ಭಾಗವಹಿಸಲಿದ್ದು, ಎರಡು ದಿನಗಳ ಕಾಲ ಕ್ರೀಡಾಕೂಟ ಜರುಗಲಿದೆ.


