ತುಮಕೂರು ತಾಲೂಕಿನ ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಪ್ರಸ್ತಾಪಿತ ಔಟರ್ ರಿಂಗ್ ರಸ್ತೆಗೆ ಸರಕಾರ ರೈತರ ಅನುಮತಿ ಇಲ್ಲದೆ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿರುವ ಕ್ರಮವನ್ನು ಖಂಡಿಸಿ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಸರಕಾರ ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಔಟರ್ ರಿಂಗ್ ರಸ್ತೆಗೆ ತುಮಕೂರು ತಾಲೂಕಿನ ಸುಮಾರು 46 ಹಳ್ಳಿಗಳ 650 ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದರಿಂದ ನೂರಾರು ಎಕರೆಯಲ್ಲಿ ಬೆಳೆದಿರುವ ಅಡಿಕೆ, ತೆಂಗು ಬೆಳೆಗಳ ಜೊತೆಗೆ, ಕೊಳವೆ ಬಾವಿ, ತೆರದ ಬಾವಿ ಮೂಲಕ ನೀರು ತೆಗೆದು ತರಕಾರಿ, ಹಣ್ಣು, ಹೂವು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಸಾವಿರಾರು ಜನ ಕೃಷಿ ಕೂಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಸರಕಾರ ರೈತರೊಂದಿಗೆ ಚರ್ಚಿಸದೆ, ಸೋಷಿಯಲ್ ಅಸೆಸ್ಮೆಂಟ್ ಮಾಡದೆ ಭೂಸ್ವಾಧೀನಕ್ಕೆ ಮುಂದಾಗಿದೆ. ಇದರಿಂದ ಸುಮಾರು 750 ರೈತ ಕುಟುಂಬಗಳು ಬೀದಿಗೆ ಬರಲಿದ್ದಾರೆ. ಹಾಗಾಗಿ ಸರಕಾರ ಕೂಡಲೇ ಔಟರ್ ರಿಂಗ್ ರೋಡ್ ಪ್ರಸ್ತಾಪ ಕೈಬಿಟ್ಟು, ಹಾಲಿ ಇರುವ ರಸ್ತೆಯನ್ನೇ ಆಗಲೀಕರಣ ಮಾಡಿ, ಕೈಗಾರಿಕಾ ಪ್ರದೇಶಗಳಿಗೆ ಸುಗಮ ದಾರಿಕಲ್ಪಿಸಬೇಕೆಂದು ಆಗ್ರಹಿಸಿದರು.
ಸರಕಾರದ ಪ್ರಸ್ತಾಪಿತ ಔಟರ್ ರಿಂಗ್ ರೋಡ್ಗೆ ಭೂ ಸ್ವಾಧೀನಕ್ಕೆ ಸಂಬAಧಿಸಿದAತೆ ಹಲವಾರು ಬಾರಿ ಜಿಲ್ಲಾಧಿಕಾರಿಗಳು ಹಾಗೂ ಸಂಬAಧಪಟ್ಟ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಹೊಸ ರಸ್ತೆಯಿಂದ ಜನಜೀವನದ ಮೇಲಾಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರೂ ನಮ್ಮ ಮನವಿಯನ್ನು ಪುರಸ್ಕರಿಸದೆ, ಬಂಡವಾಳಿಗರಿಗೆ ನೆರವಾಗಲು ಮುಂದಾಗಿದೆ. ರಸ್ತೆಯ ಜೊತೆಗೆ, ರಸ್ತೆಯ ಇಕ್ಕೆಲಗಳ ಐದಾರು ಕಿ.ಮಿ. ಭೂಮಿಯನ್ನು ಸಹ ವಶಪಡಿಸಿಕೊಂಡು ಕೈಗಾರಿಕಾ ವಲಯ ಸ್ಥಾಪಿಸಲು ಸರಕಾರ ಹುನ್ನಾರ ನಡೆಸಿದೆ ಎಂದು ಹೇಳಿದರು.
ಎಐಕೆಕೆಎಂಎಸ್ ಜಿಲ್ಲಾಧ್ಯಕ್ದ ಎಸ್.ಎನ್.ಸ್ವಾಮಿ ಮಾತನಾಡಿದರು. ಜಿ.ಎಸ್.ಶಂಕರಪ್ಪ, ಉದಯಕುಮಾರ್, ಚಿಕ್ಕಬೋರೇಗೌಡ, ಕಂಬೇಗೌಡ, ಅಜ್ಜಪ್ಪ, ತಿಮ್ಮೇಗೌಡ, ರಂಗಹನುಮಯ್ಯ, ಶಬ್ಬೀರ್, ಬಾಧಿತ ಗ್ರಾಮಗಳ ಮುಖಂಡರಾದ ನಂದಿಹಳ್ಳಿ ದಾಸೇಗೌಡ, ಚಂದ್ರಪ್ಪ, ಪ್ರಮೋದ್, ಹಳೆನಿಜಗಲ್ಲು ಗ್ರಾ.ಪಂ.ಸದಸ್ಯೆ ಪುಪ್ಪಕಲಾ, ದೇವರ ಹೊಸಹಳ್ಳಿಯ ಪ್ರಭುದೇವರು, ಕೊಳ್ಳಿಹಳ್ಳಿ ಕುಮಾರ್, ಪಾಪಯ್ಯ, ಭೈರಸಂದ್ರ ರಮೇಶಪ್ಪ, ಸಿದ್ದಗಂಗಯ್ಯ, ರಾಜೇಶೇಖರ್, ಸುರೇಶ್.ಬಿ.ಕೆ., ಉದಯಕುಮಾರ್, ಅಶ್ವಥನಾರಾಯಣ್, ಕೌತುಮಾರನಹಳ್ಳಿಯ ಧರ್ಮಯ್ಯ, ಮಲ್ಲೇಶ್, ರೇಣುಕಯ್ಯ, ಕಿತ್ತಗಾನಹಳ್ಳಿಯ ನರಸಿಂಹರಾಜು, ಮೋಹನಕುಮಾರ್, ಗೋಪಾಲಯ್ಯ, ಸುರೇಶ.ಜೆ.ಸಿ.ಬಿ, ಮಾನಂಗಿ, ಚಿಕ್ಕಹೊಸೂರಿನ ಲಿಂಗರಾಜು, ಚಿಕ್ಕಹನುಮಂತಯ್ಯ ಪಾಲ್ಗೊಂಡಿದ್ದರು.


