Monday, March 16, 2026
Google search engine
Homeಮುಖಪುಟ‘ಭಾರತೀಯ ಸೇನೆ ಬೆಂಬಲಿಸಿ ತುಮಕೂರಿನಲ್ಲಿ ಮುಸ್ಲೀಮರ ಸಾಮೂಹಿಕ ಪ್ರಾರ್ಥನೆ

‘ಭಾರತೀಯ ಸೇನೆ ಬೆಂಬಲಿಸಿ ತುಮಕೂರಿನಲ್ಲಿ ಮುಸ್ಲೀಮರ ಸಾಮೂಹಿಕ ಪ್ರಾರ್ಥನೆ

ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿಕೋರಿ, ಉಗ್ರರ ವಿರುದ್ದ ದಾಳಿ ನಡೆಸುತ್ತಿರುವ ಭಾರತೀಯ ಸೇನೆ ವಿಜಯ ಸಾಧಿಸಲಿ ಎಂದು ಪ್ರಾರ್ಥಿಸಿ, ಮುಸ್ಲಿಂ ಬಾಂಧವರು ತುಮಕೂರು ನಗರದ ಮೆಕ್ಕಾ ಮಸೀದಿ ಸೇರಿದಂತೆ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮುತ್ತುವಲ್ಲಿಗಳ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಕ್ಫ್ ಮತ್ತು ಅಲ್ಪಸಂಖ್ಯಾತರ ಸಚಿವ ಜಮೀರ್ ಅಹಮದ್ ಖಾನ್ ಅವರ ಕರೆಯ ಮೇರೆಗೆ ರಾಜ್ಯದಲ್ಲಿ ಶುಕ್ರವಾರದ ಮಧ್ಯಾಹ್ನದ ಪ್ರಾರ್ಥನೆಯ ವೇಳೆ ದೇಶದ ಸೇನಗೆ ನೈತಿಕ ಬೆಂಬಲ ಕೋರಿ, ಹಾಗೂ ಯುದ್ದದಲ್ಲಿ ಭಾರತೀಯ ಸೇನೆಗೆ ವಿಜಯ ಲಭಿಸಲಿ ಎಂದು ಕೋರಿದರು.

ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತರ ಮುಖಂಡ ತಾಜುದ್ದೀನ್ ಷರಿಫ್, ಭಾರತದಲ್ಲಿರುವ ಮುಸ್ಲಿಂರಿಗೆ ಭಾರತವೇ ತಾಯ್ನಾಡು. ದೇಶ ಮೊದಲು, ಹಾಗಾಗಿ ಪಾಕಿಸ್ತಾನದೊಂದಿಗೆ ಆರಂಭಗೊಂಡಿರುವ ಯುದ್ದದಲ್ಲಿ ಭಾರತದ ಸೇನೆ ವಿಜಯ ಸಾಧಿಸುವುದರ ಜೊತೆಗೆ, ಪೆಹಲ್ಗಾಮ್ ದಾಳಿಯಲ್ಲಿ ಮೃತರ ಆತ್ಮಕ್ಕೆ ಶಾಂತಿದೊರಕಿಸಲು, ಪ್ರವಾಸಿಗರ ಮೇಲೆ ದಾಳಿ ನಡೆಸಿದ ಎಲ್ಲಾ ಉಗ್ರರನ್ನು ಸದೆ ಬಡೆಯಬೇಕು ಎಂದು ಹೇಳಿದರು.

ಅಲ್ಪಸಂಖ್ಯಾತ ಮುಖಂಡ ಅಫ್ಸರ್‌ಖಾನ್ ಮಾತನಾಡಿ, ಭಾರತೀಯ ಸೇನೆ ಬಲಿಷ್ಠವಾಗಿದೆ. ನಮ್ಮ ಸೇನೆಗೆ ನೈತಿಕ ಬಲ ತುಂಬುವ ನಿಟ್ಟಿನಲ್ಲಿ ನಾವು ಶುಕ್ರವಾರದ ನಮಾಜಿನ ವೇಳೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ. ಸೇನಾ ಕಾರ್ಯಾಚರಣೆ ವೇಳೆ ನಮ್ಮ ದೇಶದ ಒಗ್ಗಟ್ಟು ಪ್ರದರ್ಶನಗೊಂಡಿದೆ. ಹಿಂದು, ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ ಎಲ್ಲರೂ ಸೇರಿದಾಗ ಮಾತ್ರ ಎಂಬುದನ್ನು ಕಾರ್ಯಚರಣೆಯ ಪೋಟೋಗಳೇ ಸಾಬೀತು ಮಾಡಿವೆ. ಇಡೀ ಮುಸ್ಲಿಂ ಸಮುದಾಯ ಭಾರತದ ಸೇನೆಯೊಂದಿಗೆ ಇದೆ ಎಂದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಮೌಲಾನ ಯಾಸೀನ್ ಸಾಬ್, ಮಸೀದಿ ಕಾರ್ಯದರ್ಶಿ ಅಬ್ದುಲ್ ಸುಭಾನ್, ಸೈಯದ್ ಸುಭಾನ್‌ಅಪ್ಸರ್ ಪಾಷ, ತನ್ವೀರ್, ಅದೀಬ್ ಅಹಮದ್, ಅಪ್ಸರ್‌ಖಾನ್ ಮುಜಾಹಿದ್ ಪಾಷ, ಫಾರೂಕ್‌ಅಹಮದ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular