ಭಾರತದ ಗಡಿಯಲ್ಲಿ ಘಟಿಸುತ್ತಿರುವ ವಿದ್ಯಮಾನಗಳಿಂದಾಗಿ ಸಹಕಾರಿ ರತ್ನ ಕೆ, ಎನ್ ರಾಜಣ್ಣನವರ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಕೆಎನ್.ಆರ್. ಮತ್ತು ಆರ್.ಆರ್್ ಅಭಿಮಾನಿ ಬಳಗ ತಿಳಿಸಿದೆ
ಮೇ.13ರಂದು ಸಹಕಾರ ಸಚಿವರ ಕೆ.ಎನ್. ರಾಜಣ್ಣ ರವರ 75ವರ್ಷದ ಅಮೃತ ಮಹೋತ್ಸವ ಮತ್ತು ಅಭಿನಂಧನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕಾಗಿ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪೆಂಡಾಲ್ ಹಾಕುವ ಕಾರ್ಯ ಮುಂದುವರೆದಿತ್ತು.
ಮುಂದಿನ ದಿನಾಂಕವನ್ನು ನಿಗದಿಯಾದ ಕೊಡಲೇ ತಿಳಿಸಲಾಗುವುದು ಎಂದು ಬಳಗದ ಡ್ಯಾಗೇರಹಳ್ಳಿ ವಿರೂಪಾಕ್ಷ ಮತ್ತು ಕೊಟ್ಟಶಂಕರ್ ತಿಳಿಸಿದ್ದಾರೆ.


