ರೈತರಿಗೆ ಅನುಕೂಲವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ದಿನಗಳ ಹಿಂದೆ ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷರ ಸಭೆ ನಡೆಸಿ ಪ್ರತಿ ಲೀಟರ್ ಹಾಲಿನ ದರ ನಾಲ್ಕು ರೂಪಾಯಿ ಹೆಚ್ಚಳ ಮಾಡಿ ಆದೇಶವನ್ನು ಮಾಡಿದರು. ಈ ಹಿನ್ನೆಲೆಯಲ್ಲಿ ತುಮಕೂರು ಹಾಲು ಉತ್ಪಾದಕರ ಒಕ್ಕೂಟ ಮಂಡಳಿಯ ಸಭೆ ನಡೆಸಿ ರೈತರ ಪರ ತಿರ್ಮಾನ ಕೈಗೊಳ್ಳಲಾಗಿದೆ ಎಂದು ತುಮುಲ್ ಅಧ್ಯಕ್ಷ ಹಾಗೂ ಪಾವಗಡ ಶಾಸಕ ಹೆಚ್ ವಿ ವೆಂಕಟೇಶ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳದ ಜನವರಿ ತಿಂಗಳಿಂದ ಬಿಸಿಲಿನ ತಾಪಕ್ಕೆ ಹಾಲಿನ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಪ್ರತಿ ತಿಂಗಳು ನಾಲ್ಕು ಕೋಟಿ ಇಪ್ಪತ್ತೊಂದು ಲಕ್ಷ ಹೊರೆಯಾಗುತ್ತಿದೆ. ರೈತರಿಗೆ ಸಹಾಯವಾಗಲಿ ಎಂದು ಹಾಲಿನ ದರ ಏರಿಕೆ ಮಾಡಿರುವುದರಿಂದ ಈ ಹೊರೆಯ ಪ್ರಮಾಣ ಕೆಡಿಮೆಯಾಗಲಿದೆ. ಜೊತೆಗೆ ರೈತರಿಗೂ ಸಹ ಅನುಕೂಲವಾಗಲಿದೆ ಎಂದರು.
ಹಾಲಿನ ದರ ಹೆಚ್ಚಳದ ಆದೇಶವು ಮಂಗಳವಾರದಿಂದ ಜಾರಿಯಾಗಿ ಅನ್ವಯವಾಗಲಿದೆ ಎಂದ ವೆಂಕಟೇಶ್ ಹಾಲಿನ ದರ ಹೆಚ್ಚಳ ಮಾಡಿ ಆ ಹಣ ರೈತರಿಗೆ ಸಿಗುವಂತೆ ಆದೇಶ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಪಶುಸಂಗೋಪನ ಸಚಿವ ಕೆ. ವೆಂಕಟೇಶ್ aವರಿಗೆ ಒಕ್ಕೂಟದ ವತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತುಮುಲ್ ನಿರ್ದೇಶಕರಾದ ಭಾರತಿದೇವಿ ಕೆ ಪಿ , ಎಂ.ಕೆ. ಪ್ರಕಾಶ್, ಬಿ ನಾಗೇಶ್ ಬಾಬು, ಎಸ್.ಆರ್. ಗೌಡ, ಚಂದ್ರ ಶೇಖರ್ ರೆಡ್ಡಿ, ನಂಜೇಗೌಡ, ಸಿವಿ ಮಹಾಲಿಂಗ, ಡಿ ಕೃಷ್ಣ ಕುಮಾರ್, ಸಿದ್ದಗಂಗಯ್ಯ, ಬಿ ಎನ್ ಶಿವಪ್ರಕಾಶ್, ತುಮುಲ್ ಎಂ ಡಿ ಶ್ರೀನಿವಾಸನ್ ಸೇರಿ ಇತರೆ ಅಧಿಕಾರಿಗಳು ಹಾಜರಿದ್ದರು.