Monday, March 16, 2026
Google search engine
Homeಮುಖಪುಟ‘ಹೆಣ್ಣು ಮಕ್ಕಳು ಹೆಚ್ಚು ಜಾಗ್ರತೆಯಿಂದಿರಿ-ನ್ಯಾ.ನೂರುನ್ನೀಸಾ

‘ಹೆಣ್ಣು ಮಕ್ಕಳು ಹೆಚ್ಚು ಜಾಗ್ರತೆಯಿಂದಿರಿ-ನ್ಯಾ.ನೂರುನ್ನೀಸಾ

ಹೆಣ್ಣು ಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಗಳು ಹೆಚ್ಚುತ್ತಿದ್ದು, ಈ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಬಾಲಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಹದಿಹರೆಯ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳು-ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹದಿಹರೆಯದ ಅವಧಿಯಲ್ಲಿ ಗೊಂದಲಗಳು ಉಂಟಾಗುವುದು ಸಹಜ. ಸಮಸ್ಯೆಗಳು ಹೆಚ್ಚಿದಂತೆ ಸವಾಲುಗಳೂ ಹೆಚ್ಚುತ್ತವೆ. ಇವೆಲ್ಲವನ್ನೂ ನಿಭಾಯಿಸಲು ಆತ್ಮಸ್ಥೈರ್ಯ ಮುಖ್ಯ. ತಂದೆ ತಾಯಿಯರ ಮಾತುಗಳನ್ನು ಸಕಾರಾತ್ಮಕವಾಗಿ ಆಲಿಸಬೇಕು. ಶಿಕ್ಷಕರಿಗೆ ಗೌರವ ಕೊಡಬೇಕು. ಈ ಅವಧಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಮುಂದುವರಿದರೆ ಭವಿಷ್ಯ ಭಯಾನಕವಾಗುತ್ತದೆ ಎಂಬ ಎಚ್ಚರವಿರಲಿ ಎಂದರು.

ಯುವ ಜನತೆ ಹೆಚ್ಚು ಹಾಳಾಗುತ್ತಿರುವುದೇ ಮೊಬೈಲ್ ಬಳಕೆಯಿಂದ. ಒಮ್ಮೆ ಮೊಬೈಲ್‌ಗಳಿಗೆ ಅಡಿಕ್ಟ್ ಆದರೆ ಅದರಿಂದ ಹೊರಬರುವುದು ಕಷ್ಟ. ಅಪರಿಚಿತರು ಹತ್ತಿರವಾಗುತ್ತಾರೆ. ನಮ್ಮ ಶಿಕ್ಷಣ ಮೊಟಕಾಗುತ್ತದೆ. ಪ್ರೇಮದ ಬಲೆಗೆ ಸಿಲುಕಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳಿಗೆ ಇಡೀ ಕುಟುಂಬ ಬಲಿಯಾಗಬೇಕಾಗುತ್ತದೆ. ಸೈಬರ್ ಕ್ರೆöÊಂಗಳಿಗೂ ಒಳಗಾಗಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಆರ್.ಜೆ.ಪವಿತ್ರ ಮಾತನಾಡಿ, ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಮಕ್ಕಳು ಮಾಡುವ ತಪ್ಪಿನಿಂದಾಗಿ ಪೋಷಕರು ಪರಿತಪಿಸುತ್ತಿದ್ದಾರೆ. ಯಾವ ಪೋಷಕರೂ ಮಕ್ಕಳ ಬಗ್ಗೆ ಕೆಟ್ಟದ್ದು ಬಯಸುವುದಿಲ್ಲ. ಆದರೆ ಪೋಷಕರನ್ನೇ ಮಕ್ಕಳು ವಿಲನ್ ರೀತಿಯಲ್ಲಿ ಕಾಣುತ್ತಿದ್ದಾರೆ. ಹದಿಹರೆಯದ ಈ ಅವಧಿಯಲ್ಲಿ ಶಿಕ್ಷಣವೇ ಮುಖ್ಯವಾಗಬೇಕು. ಅದಕ್ಕಾಗಿ ಓದಬೇಕು. ಪುಸ್ತಕಗಳೇ ನಮ್ಮ ಗೆಳೆಯರಾಗಬೇಕು. ಈಗ ಕತ್ತು ಬಗ್ಗಿಸಿ ಓದಿದರೆ ಮುಂದೆ ತಲೆಎತ್ತಿ ಓಡಾಡಬಹುದು ಎಂದು ಸಲಹೆ ನೀಡಿದರು.

ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯರು, ವಕೀಲ ಸಾ.ಚಿ.ರಾಜಕುಮಾರ ಮಾತನಾಡಿ, ಕಳೆದ 100 ವರ್ಷಗಳ ಹಿಂದಿನ ಸಮಾಜವನ್ನು ಅವಲೋಕಿಸಿದರೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರö್ಯವೇ ಇರಲಿಲ್ಲ. ಸತಿ ಸಹಗಮನ, ಬಾಲ್ಯ ವಿವಾಹದಂತಹ ಹಲವು ಅನಿಷ್ಠಗಳು ಮನೆ ಮಾಡಿದ್ದವು. ಈಗ ಕಾಲ ಸಂಪೂರ್ಣ ಬದಲಾಗಿದೆ. ಹಲವು ಹಕ್ಕುಗಳು ಪ್ರಾಪ್ತವಾಗಿವೆ. ಅದರ ಜೊತೆಯಲ್ಲೇ ಅಸುರಕ್ಷಿತ ವಾತಾವರಣವೂ ಹೆಚ್ಚುತ್ತಿದೆ. ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ದಿನೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್ ಇದ್ದರು. ಬಾಲ ಭವನದ ಸಂಯೋಜಕಿ ಮಮತ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular