Saturday, March 7, 2026
Google search engine
Homeಮುಖಪುಟರೈತರಿಗೆ ಶೀಘ್ರವೇ ಸಹಾಯಧನ ಬಿಡುಗಡೆಗೆ ಒತ್ತಾಯ

ರೈತರಿಗೆ ಶೀಘ್ರವೇ ಸಹಾಯಧನ ಬಿಡುಗಡೆಗೆ ಒತ್ತಾಯ

ಮೀನುಗಾರಿಕೆ ಇಲಾಖೆಯಡಿಯಲ್ಲಿ ವಿವಿಧ ಘಟ್ಟಗಳನ್ನು ನಿರ್ಮಿಸಿ ಎರಡು ವರ್ಷವಾದರೂ ರೈತರಿಗೆ ಸಹಾಯಧನ ಬಿಡುಗಡೆ ಮಾಡದೇ ಇರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಳಿಕ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ಶೀಘ್ರವಾಗಿ ಸಹಾಯಧನವನ್ನು ನೀಡುವಂತೆ ಒತ್ತಾಯಿಸಿ ತುಮಕೂರಿನ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ನಾಗಣ್ಣ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೂಜಾರಪ್ಪ, ರೈತರು ಸಾಕಷ್ಟು ಕೈಸಾಲ, ಫೈನಾನ್ಸ್ ಸಾಲ ಒಡವೆಗಳನ್ನು ಆಡಇಟ್ಟು ಸಾಲದ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದ್ದಾರೆ. ಈ ಕುರಿತು ತಮ್ಮ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಹ ವಿನಾಕಾರಣ ತಾವು ವಿಳಂಬ ಧೋರಣೆ ಮಾಡುತ್ತಿದ್ದು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅನುಮೋದನೆ ಕೊಟ್ಟು ಸಹಾಯಧನ ಬಿಡುಗಡೆ ಮಾಡಿ ಒಂದೂವರೆ ತಿಂಗಳಾಗಿದೆ. ಆದರೂ ತುಮಕೂರು ಜಿಲ್ಲೆಯಲ್ಲಿ ಮಾತ್ರ ತಾವು ಸಹಾಯ ಧನ ಕೊಡದೇ ರೈತರಿಗೆ ವಿನಾಕಾರಣ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪಾವಗಡ ತಾಲೂಕು ಅಧ್ಯಕ್ಷ ಶಿವು, ಕಾರ್ಯದರ್ಶಿ ಪೂಜಾರಿ ಚಿತ್ತಯ್ಯ, ಗುಡಿಪಲ್ಲಪ್ಪ , ರಮೇಶ್, ಗೋವಿಂದಪ್ಪ, ಚಿತ್ತಯ್ಯ, ರಾಮಾಂಜಿನಪ್ಪ, ಮುಕುಂದಪ್ಪ, ಕೆ.ಟಿ.ಹಳ್ಳಿ ಹರೀಶ್, ದುರ್ಗಪ್ಪ, ನರಸಿಂಹಪ್ಪ, ಪುಟ್ಟನಂಜಯ, ಇನ್ನು ಹಲವು ರೈತರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular