ಯಾವುದನ್ನು ವಿಶಿಷ್ಟವೆಂದು ಮಾತಿನಿಂದ ಸಾಮಾಜಿಕ ಬದುಕಿನಿಂದ ನಿಷೇಧಿಸಲಾಗಿತ್ತೋ, ಆ ಪದ ಸಮುದಾಯ ಆಚರಣೆಗಳೆ ಸಾಹಿತ್ಯದ ಮುಖ್ಯ ಅಭಿವ್ಯಕ್ತಿಯಾಗಿದ್ದು, ಇದರ ಪರಿಣಾಮವಾಗಿ ತೊಂಭತ್ತರ ದಶಕ ‘ದಲಿತ ಚಿಂತನೆ’ಯನ್ನು ತುಮಕೂರು ವಿಭಿನ್ನವಾಗಿ ಅವಾಹಿಸಿಕೊಂಡಿತ್ತು ಎಂದು ವಿಮರ್ಶಕ ಡಾ.ರವಿಕುಮಾರ್ ನೀ.ಹ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ತುಂಬಾಡಿ ರಾಮಯ್ಯ ಬರೆದಿರುವ ಆತ್ಮಕಥನ ‘ಮಣೆಗಾರ-25 ಕಾರ್ಯಕ್ರಮದಲ್ಲಿ ಮೊದಲ ಗೋಷ್ಟಿಯಲ್ಲಿ ಅವರು ಮಾತನಾಡಿದರು.
ಅಂದರೆ ದಲಿತ ಚಿಂತನೆಯನ್ನು, ದಲಿತ ವಿವೇಕವನ್ನು, ಹೊಸ ಪರಿಭಾಷೆ, ನುಡಿಗಟ್ಟುಗಳ ಮೂಲಕ ಕಟ್ಟಿಕೊಡಲು ಇದೇ ತುಮಕೂರು ನೆಲ ತಾತ್ವಿಕವಾಗಿ ಸಿದ್ದಗೊಂಡಿತ್ತು ಇಡೀ ಕರ್ನಾಟಕದ ಚಿಂತನೆ ದಲಿತ ಅಸ್ಮಿತೆಯನ್ನು ಯೋಚಿಸುತ್ತಿದ್ದ ಬಗೆಗೂ, ತುಮಕೂರು ನೆಲ ಕಟ್ಟಿಕೊಂಡ ಬಗೆಗೂ, ವ್ಯತ್ಯಾಸವನ್ನು ಕಾಣಬಹುದು ಎಂದರು.
ತುಮಕೂರು ಜಿಲ್ಲೆ ದಲಿತ ಸಂಘರ್ಷ ಸಮಿತಿಯನ್ನು ವಿಭಿನ್ನವಾಗಿ ರೂಪಿಸಿದ ನೆಲ. 1975 ರಲ್ಲಿ,’ಹೊಲೆಮಾದಿಗರ ಹಾಡು’, 1981ರಲ್ಲಿ ಮ.ನ.ಜ ಅವರ ‘ಕೇಳು ಜಗಮಾದಿಗ ಹೊಲೆಯ’ ಕೃತಿ ಪ್ರಕಟವಾಗಿತ್ತು. 1999 ರಲ್ಲಿ ತುಂಬಾಡಿ ರಾಮಣ್ಣ ಅವರ ‘ಮಣೆಗಾರ’ ಪ್ರಕಟವಾಗಿದೆ. ಸಮುದಾಯಗಳ ಹೆಸರಿನಲ್ಲಿ ಪ್ರಕಟವಾದ ಕೃತಿಗಳು ಎಂದು ಹೇಳಿದರು.
ಮಣೆಗಾರ ತುಮಕೂರಿನ ಮೊದಲ ದಲಿತ ಆತ್ಮ ಕಥೆ ಅಲ್ಲ ಮಳೆಗಾರ ಹುಟ್ಟಿದ ಕಾಲವು ತುಮಕೂರು ನೆಲವು, ದಲಿತ ಚಿಂತನೆ ಪಡೆದ ಆಯಾಮವೂ ಮುಖ್ಯವಾಗಿದೆ. ಮಣೆಗಾರ ಹುಟ್ಟಿದ ಕಾಲದ ಹೊತ್ತಿಗೆ ದಸಂಸ ತನ್ನ ಒಗ್ಗೂಡುವಿಕೆಯ ಶಕ್ತಿಯನ್ನು ಕಳೆದುಕೊಂಡಿತ್ತು. ಸಿಬಿರುಗಳು ಎದ್ದಿದ್ದವು. ಏಕ ಇದ್ದಿದ್ದು ಅನೇಕವಾಗಿತ್ತು. ಆರಂಭದಲ್ಲಿ ಎದುರಾಳಿಯನ್ನು ಕಂಡುಕೊಂಡಿದ್ದ ದಸಂಸ ತೊಂಭತ್ತರ ದಶಕದ ಹೊತ್ತಿಗೆ ಹೊಸ ಎದುರಾಳಿಗಳನ್ನು ಸೃಷ್ಟಿಸಿಕೊಂಡಿತ್ತು. ಕೂಡಿಕೊಂಡಿದ್ದವೆಲ್ಲ ಒಡೆದು ಹೋಗಿದ್ದವು ಎಂದು ರವಿಕುಮಾರ್ ತಿಳಿಸಿದರು.
ಮಳೆಗಾರ ಮೇಲ್ನೋಟಕ್ಕೆ ಒಂದು ಸಮುದಾಯದ ಹೆಸರು ಎಂಬಂತೆ ಕೇಳಿಸುತ್ತದೆ ನಿಜ. ಆ ಕಾಲಕ್ಕೆ ಹೆಸರು ಹೇಳಿಕೊಳ್ಳಲಾಗದ ಅನೇಕ ಸಮುದಾಯಗಳು ತಮ್ಮ ಜಾತಿಯ ಹೆಸರನ್ನು ಅಸ್ಮಿತೆಯನ್ನಾಗಿ ಬಳಸುವ ಆಂತರಿಕ ಒತ್ತಾಯವಿತ್ತು. ಅದರ ಭಾಗವಾಗಿ ಮಣೆಗಾರ ಕಟ್ಟಿಕೊಂಡಿರಬಹುದು. ಆದರೆ ಕೃತಿಯೊಳಗೆ ಒಂದೇ ಸಮುದಾಯದ ಬದುಕಿಲ್ಲ. ದಕ್ಕಲ ಲಂಬಾಣಿ ಸಾಬ್ರು ಮನೆ ಕಟ್ಟುವ ಉಗ್ರ ಕಟ್ಟುವಾಗಿನ ಸಮುದಾಯಗಳ ಸಾಮೂಹಿಕ ಜವಾಬ್ದಾರಿ ಮುಖ್ಯವಾದ ಜೀವನ ಪ್ರೀತಿಯನ್ನು ಮಂಡಿಸುತ್ತದೆ ಎಂದು ವಿವರಿಸಿದರು.
ಮನೆಗಳ ಕುಲ ಸಂಬಂಧಿ ರೂಪಕ ಮತ್ತು ಸಾಮಾಜಿಕ ಸಂಗೋಪನೆಯ ಅಭಿವ್ಯಕ್ತಿ ಸಮುದಾಯಗಳ ಅಸ್ಮಿತೆ. ಕೆಬಿ ಕಾವ್ಯದ ಮೂಲಕ ಕುಲಮೂಲೀಯಕ್ಕೆ ಇಳಿದು ಈ ಲೋಕವನ್ನು ಎದುರುಗೊಳ್ಳುತ್ತಿದ್ದರೆ , ಅದೇ ಹೊತ್ತಿನಲ್ಲಿ ತುಂಬಾಡಿ ರಾಮಯ್ಯನವರು ‘ಕುಲಸಂಬಂಧಿ’ ಯಾಗಿ ಜೀವನ ಪ್ರೀತಿಯನ್ನು ತಡಕಿಕೊಳ್ಳುತ್ತಿದ್ದರು. ದಕ್ಲಕಥಾ ದೇವಿ ಕಾವ್ಯವು ತುಂಬಾಡಿ ರಾಮಯ್ಯ ನವರ ‘ಮಣೆಗಾರ’ ಇವೆರಡು ತುಮಕೂರು ನೆಲದ ದಲಿತ ಚಿಂತನೆ ರೂಪ ಇವೆರಡು ದಲಿತ ಸಮುದಾಯವನ್ನು ಕುರಿತು ಒಂದು ಸೂಚನೆ ಮತ್ತೊಂದು ಅನುಭವ ಕಥನ.
ಮಣೆಗಾರ ಕಳೆದ 40 50 ವರ್ಷಗಳ ‘ಸಮುದಾಯಗಳ ಕರ್ನಾಟಕ’ ಈ ಕೃತಿಯಲ್ಲಿ ಕಣ್ದೆರೆದಿದೆ. ಗ್ರಾಮ ಭಾರತ ತನ್ನ ಪಾಡಿಗೆ ತಾನು ಹೇಗೆ ‘ಡೆಮಾಕ್ರೆಟಿಕ್ ‘ ಚಿಂತನೆಯನ್ನು ಧರಿಸಿದೆ ಎಂಬುದನ್ನು ನಮ್ಮ ಮುಂದಿರಿಸುತ್ತದೆ ಎಂದರು.
ನಾವು ಒಪ್ಪಿಕೊಂಡಿರುವ ಸಂವಿಧಾನ ತನ್ನ ಪ್ರಸ್ತಾವನೆಯಲ್ಲಿ ಮಂಡಿಸುವ ಪ್ರಜಾಸತ್ತಾತ್ಮಕ ನೆಲೆಗಳನ್ನು ನಂಬಿಕೆ, ಉಪಾಸನೆ, ಸಾಮಾಜಿಕ ಸಮಾನತೆ ಇತ್ಯಾದಿ ಅಂಶಗಳನ್ನು ಈ ಮಣೆಗಾರ ಹೊತ್ತು ನಿಂತಿದೆ ಎಂದು ಹೇಳಿದರು.
ಇದರ ನಡುವೆ ಕಾಡುವುದು ಇಡೀ ಮಳೆಗಾಲ ಎಲ್ಲಿಯೂ ಆಕ್ರೋಶವನ್ನು ತೋರುವುದಿಲ್ಲ ಕೊನೆಯಲ್ಲಿ ಹಾಸ್ಟೆಲ್ ವಿಚಾರಕ್ಕೆ ಸಂಘರ್ಷ ತೀವ್ರವಾಗುತ್ತದೆ ಎನ್ನುವಷ್ಟರಲ್ಲಿ “ಪ್ರಿನ್ಸಿಪಾಲ್ ಬಾಚಿ ತಬ್ಬಿಕೊಂಡರು”. ಆದರೆ ಮಣೆಗಾರದಲ್ಲೂ ಸಿಟ್ಟಿದೆ. ಆದರೆ ಅದಕ್ಕಿಂತಲೂ ಮಿಗಿಲಾದ ಜೀವನ ಪ್ರೀತಿ ಇದೆ ಬುದ್ಧದೇವ ಪ್ರೀತಿಯಿಂದ ಜಗತ್ತನ್ನು ಗೆಲ್ಲುತ್ತಾ ಹೋಗುತ್ತಾನೆ. ದಸಂಸ ಕೊನೆಗೆ ಆ ದಾರಿಯನ್ನು ತುಳಿಯಬೇಕು ಎಂದು ಡಿ.ಆರ್ ನಾಗರಾಜ್ ಸೂಚಿಸಿದ್ದರು ಎಂದು ತಿಳಿಸಿದರು.
ತುಮಕೂರು ನೆಲ ಬುದ್ಧತ್ವದ ಪ್ರೀತಿಯನ್ನು ಉಳಿಸುತ್ತಾ ಅನುಭವದ ರೂಪವನ್ನು ತಳೆಯುತ್ತಿತ್ತು. ಇದರ ಪರಿಣಾಮವಾಗಿ ಮಣೆಗಾರದಲ್ಲಿ ಆಕ್ರೋಶಕಿಂತ ಪ್ರೀತಿ ಇದೆ . ಪ್ರತೀಕಾರಕ್ಕಿಂತ ಕೂಡಿಕೊಳ್ಳುವುದರ ಕಡೆ ಕಣ್ಣು ನೆಟ್ಟಿದೆ ಎಂದರು.
ಹಾಗೆ ನೋಡಿದರೆ ಮಣೆಗಾರ ಕೇವಲ ಸಾಹಿತ್ಯಕ ಪಠ್ಯವಲ್ಲ. ಈ ಪಠ್ಯಕ್ಕೆ ಅನೇಕ ಆಯಾಮಗಳಿವೆ. ಸಾಮಾಜಿಕವಾದ ನೋಟವು, ಮಾನವ ಶಾಸ್ತ್ರದ ಕಾಣಿಕೆಗಳು, ಅದಕ್ಕೂ ಮುಖ್ಯವಾಗಿ ಜಿಯಾಗ್ರಫಿಕಲ್ ಆದ ಟ್ರಾವೆಲ್ಲಿದೆ. ಈ ಯಾನವೇ ಇಡೀ ಮಣೆಗಾರ ಇದನ್ನು ರೂಪಿಸಿದೆ. ತನ್ನ ಸಮುದಾಯದ ಪದವನ್ನು ಇಟ್ಟುಕೊಂಡು ಅದನ್ನು ವ್ಯಸನವಾಗಿಸಿಕೊಂಡಿಲ್ಲ. ಹಾಗೆಯೇ ಕಟ್ಟಿಕೊಂಡಿಲ್ಲ. ಮರುಕವಾಗದೆ ವಿಮರ್ಶೆಯಾಗಿ ಅರಳಿದೆ. ಮನುಷ್ಯ ಹೃದಯದ ಕಾವಲಪ್ಪ, ರೊಟ್ಟಿ ಹಂಚುತ್ತಿದ್ದ ಸಹಪಾಠಿ ಸಿದ್ದರಾಮಯ್ಯ, ಮಮತೆ ತೋರುವ ಹಾಸ್ಟೆಲ್ ಹುಡುಗಿಯರು, ಕನ್ನಡಿಗಳು ತುಂಬಿದ ಸೀರೆಯ ಮಡಿಲು, ತತ್ವಪದ ಪರಂಪರೆ … ಇತ್ಯಾದಿಗಳು. ‘ಸಮಗಾರ ಭೀಮವ್ವ ಎದೆಹಾಲು ನೀಡವ್ವ’ ಎಂದು ಎಚ್.ಎಸ್ ಶಿವಪ್ರಕಾಶ್ ಕಟ್ಟಿದ್ದರೆ ಇಲ್ಲಿ ಅಂತ ಅನೇಕ ಭೀಮವ್ವಂದಿರು ಇಡೀ ಊರಿಗೆ ಹಾಲುಣಿಸಿದ್ದಾರೆ. ಹೀಗಾಗಿ ಈ ಕಥನ ಲೋಕದ ಕಥನವಾಗಿದೆ ಎಂದು ಡಾ.ರವಿಕುಮಾರ್ ನೀಹ ತಿಳಿಸಿದರು


