Sunday, September 8, 2024
Google search engine
Homeಮುಖಪುಟಸಂಸದ ಪ್ರತಾಪ್ ಸಿಂಹ ವಿರುದ್ದ ವಿಶ್ವನಾಥ್ ಕಿಡಿ

ಸಂಸದ ಪ್ರತಾಪ್ ಸಿಂಹ ವಿರುದ್ದ ವಿಶ್ವನಾಥ್ ಕಿಡಿ

ಬೆಂಗಳೂರು-ಮೈಸೂರು ನಡುವೆ ಆಗಿರುವ ದಶಪಥ ರಸ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಧ್ರುವನಾರಾಯಣ್ ಮತ್ತು ನನ್ನ ಅವಧಿಯಲ್ಲಿ ಅವಧಿಯಲ್ಲಿ ಆಗಿರುವ ಕೆಲಸ. ಇದನ್ನು ನಾನೇ ಮಾಡಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ಕೊಚ್ಚಿಕೊಳ್ಳುವುದು ಬೇಡ ಎಂದ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಎಚ್.ವಿಶ್ವನಾಥ್, ಯುಪಿಎ ಸರ್ಕಾರದ ಮಂತ್ರಿಗಳ ಸಾಧನೆ. ಸಿದ್ದರಾಮಯ್ಯ ಕಾಲದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಮಹಾದೇವಪ್ಪ ಕಾಲದಲ್ಲಿ ಮಂಜೂರಾದ ಯೋಜನೆ. ಇದು ಪ್ರತಾಪ್ ಸಿಂಹ ಕೆಲಸ ಅಲ್ಲ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಸಂಸದೆ ಸುಮಲತಾ ಕೂಡ ದಶಪಥ ರಸ್ತೆ ಕಾಮಗಾರಿ ಕೆಲಸ ಮಾಡಿಸಿದ್ದಾರೆ ಎಂದು ಅನುಕಂಪ ವ್ಯಕ್ತಪಡಿಸಿರುವ ವಿಶ್ವನಾಥ್, ಪ್ರತಾಪ್ ಸಿಂಹ ಅವರು ಈ ಕೆಲಸವನ್ನು ನಾನೇ ಮಾಡಿಸಿದೆ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಬಿಜೆಪಿ ಕಾಲದಲ್ಲಿ ಹೊಸದಾಗಿ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದರೆ ಹೇಳಲಿ. ಬೇರೆಯವರ ಸಾಧನೆಯನ್ನು ಪ್ರತಾಪ್ ಸಿಂಹ ನನ್ನದೇ ಎಂದು ಹೇಳಿಕೊಳ್ಳುವುದು ಸಮಂಜಸವಲ್ಲ ಎಂದು ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular