Thursday, September 19, 2024
Google search engine
Homeಜಿಲ್ಲೆಬಸವರಾಜು ಆತ್ಮಹತ್ಯೆ ಪ್ರಕರಣ : ಆರೋಪಿ ಬಡ್ಡಿ ನಾಗನ ಬಂಧನ

ಬಸವರಾಜು ಆತ್ಮಹತ್ಯೆ ಪ್ರಕರಣ : ಆರೋಪಿ ಬಡ್ಡಿ ನಾಗನ ಬಂಧನ

ಮೀಟರ್ ಬಡ್ಡಿ ಕಿರುಕುಳ ನೀಡಿ ಬೇಕರಿ ಮಾಲಿಕ ಬಸವರಾಜು ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪದಡಿ ಬಡ್ಡಿ ನಾಗನನ್ನು ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.

ಬಸವರಾಜು ಪತ್ನಿ ತನ್ನ ಪತಿಯ ಆತ್ಮಹತ್ಯೆಗೆ ಬಡ್ಡಿನಾಗನೇ ಕಾರಣ ಎಂಬ ದೂರಿನ ಹಿನ್ನೆಲೆಯಲ್ಲಿ ಬಡ್ಡಿನಾಗನನ್ನು ಬಂಧಿಸಲಾಗಿದೆ.

ಗುಬ್ಬಿ ಪಟ್ಟಣದ ಹೊರವಲಯದ ಸಿಐಟಿ ಕಾಲೇಜಿನ ಮುಂಭಾಗ ಬೇಕರಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಬಸವರಾಜು ಸ್ಥಳೀಯ ವ್ಯಕ್ತಿಗಳಿಂದ ಸಾಲ ಪಡೆದಿದ್ದ ಎನ್ನಲಾಗಿದೆ.

ಹಾಸನದ ಮೂಲದವರಾಗಿದ್ದ ಬಸವರಾಜು ಹಲವು ವರ್ಷಗಳಿಂದ ಬೇಕರಿ ಇಟ್ಟುಕೊಂಡು ಕುಟುಂಬದೊಂದಿಗೆ ವಾಸವಿದ್ದರು.
ಸ್ಥಳೀಯ ನಾಗರಾಜು ಉರೂಫ್ ಬಡ್ಡಿ ನಾಗನಿಂದ ಸಾಲ ಪಡೆದಿದ್ದ. ಸಾಲವನ್ನು ಹಿಂದಿರುಗಿಸಿದ್ದರೂ, ಬಡ್ಡಿ ನಾಗನಿಗೆ ನೀಡಿದ ಚೆಕ್ ಹಿಂದಿರುಗಿಸದೆ ಮತ್ತಷ್ಟು ಹಣಕ್ಕಾಗಿ ಪೀಡಿಸಿ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ಗುಬ್ಬಿ ಪೊಲೀಸರು ಬಡ್ಡಿನಾಗನಿಗೆ ಬಸವರಾಜು ನೀಡಿದ್ದ ಚೆಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular