Thursday, September 19, 2024
Google search engine
Homeಮುಖಪುಟರಾಜ್ಯ ಸರ್ಕಾರ ಶೀಘ್ರ ಪತನ -ಸಿದ್ದರಾಮಯ್ಯ

ರಾಜ್ಯ ಸರ್ಕಾರ ಶೀಘ್ರ ಪತನ -ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಗೊಂದಲಗಳು ಮುಂದುವರಿದಿರುವುದರಿಂದ ರಾಜ್ಯ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲೇ ಸಾಕಷ್ಟು ಗೊಂದಲಗಳು ಇವೆ. ಸಚಿವರ ಖಾತೆ ಬದಲಾವಣೆ, ದೆಹಲಿ ಪ್ರವಾಸ ಇವೆಲ್ಲವೂ ನಡೆಯುತ್ತಿವೆ. ಹಾಗಾಗಿ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಹೇಳಿದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಎರಡು ದಿನಗಳ ಹಿಂದೆ ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸಿದ್ದರು. ಇದನ್ನು ಮಾಧ್ಯಮಗಳ ಮುಂದೆ ಉಲ್ಲೇಖಿಸಿದ ಸಿದ್ದರಾಮಯ್ಯ ಶಾಸಕರು ಧರಣಿ ನಡೆಸುತ್ತಾರೆ. ಇದೆಲ್ಲವೂ ಸಮಸ್ಯೆ ಇದೆ.

ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೀಶ್ವರ್, ಅರವಿಂದ್ ಬೆಲ್ಲದ್, ರಾಮದಾಸ್ ಮೊದಲಾದ ಶಾಸಕರು ದೆಹಲಿಗೆ ಹೋಗುತ್ತಾರೆ. ಖಾತೆ ಬದಲಿಸುವಂತೆ ಮತ್ತು ಖಾತೆ ನೀಡುವಂತೆ ಕೇಳುತ್ತಿದ್ದು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ. ಇದು ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular