Monday, September 16, 2024
Google search engine
Homeಮುಖಪುಟಹಿರಿಯ ಪತ್ರಕರ್ತೆ ಎಸ್.ಭುವನೇಶ್ವರಿ ನಿಧನ

ಹಿರಿಯ ಪತ್ರಕರ್ತೆ ಎಸ್.ಭುವನೇಶ್ವರಿ ನಿಧನ

ತುಮಕೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾಗಿದ್ದ ಎಸ್.ಭುವನೇಶ್ವರಿ (50)ಅವರು ಬುಧವಾರ ಬೆಳಗಿನ ಜಾವ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಾಸನದವರಾದ ಭುವನೇಶ್ವರಿ, ಈಟಿವಿಯಲ್ಲಿ ಐದು ವರದಿಗಾರರಾಗಿ ಕೆಲಸ ಮಾಡಿದ್ದರು. ನಂತರ ಅವರು ಹಿಂದೂ ಪತ್ರಿಕೆಗೆ ಸೇರಿಕೊಂಡು ಜಿಲ್ಲಾ ವರದಿಗಾರರಾಗಿಯೂ ತುಮಕೂರಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು.

ಮೃತರು ಪತಿ ಪ್ರಕಾಶ್ .ಕೆ, ಮಗ ಅಮಿತ್ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಕೆಯುಡಬ್ಲ್ಯುಜೆ ಸಂತಾಪ:
ಹಿರಿಯ ಪತ್ರಕರ್ತೆ ಭುವನೇಶ್ವರಿ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಸಂಪಾದಕರ ಸಂಘಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular