Monday, September 16, 2024
Google search engine
Homeಜಿಲ್ಲೆತುಮಕೂರು - ಬಾಲಮಂದಿರದಲ್ಲಿ ಬಾಲಕಿ ಆತ್ಮಹತ್ಯೆ

ತುಮಕೂರು – ಬಾಲಮಂದಿರದಲ್ಲಿ ಬಾಲಕಿ ಆತ್ಮಹತ್ಯೆ

ತುಮಕೂರು ನಗರದ ಅಮರಜ್ಯೋತಿ ನಗರದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿಯನ್ನು ತುಮಕೂರು ನಗರದ ಬಡ್ಡಿಹಳ್ಳಿಯ ವಾಸಿ ಎಂದು ಹೇಳಲಾಗಿದೆ. ಮನೆಯವರೊಂದಿಗೆ ಮುನಿಸಿಕೊಂಡಿದ್ದ ಬಾಲಕಿ ಮನೆ ಬಿಟ್ಟು ಹೋದ ಮೇಲೆ ಮೈಸೂರಿನಲ್ಲಿ ಪತ್ತೆಯಾಗಿದ್ದಳು. ಹೀಗಾಗಿ ಆ ಬಾಲಕಿಯನ್ನು ತುಮಕೂರಿಗೆ ಕರೆತಂದು ಬಾಲ ಮಂದಿರಲ್ಲಿ ಇಡಲಾಗಿತ್ತು ಎಂದು ಹೇಳಲಾಗಿದೆ.

ಬಾಲ ಮಂದಿರದ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಪೋಷಕರು ಮಗಳನ್ನು ನೋಡಲು ಬಂದಾಗ ಆಕೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಪೋಷಕರು ಆಕೆಯನ್ನು ಭೇಟಿಯಾಗಲು ಬಂದಾಗ ಬಾಲಕಿ ಕೊಠಡಿಯಲ್ಲಿದ್ದಳು. ಬಾಲ ಮಂದಿರದ ಸಿಬ್ಬಂದಿ ಕೊಠಡಿಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ತೆಗೆದು ನೋಡಿದಾಗ ಆ ಬಾಲಕಿ ಫ್ಯಾನಿಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular